Connect with us

Dvgsuddi Kannada | online news portal | Kannada news online

ಕುಜನ ಸ್ಥಾನ ಪಲ್ಲಟದಿಂದ ಆಗುವ ಪರಿಣಾಮದ ಮಾಹಿತಿ

ಪ್ರಮುಖ ಸುದ್ದಿ

ಕುಜನ ಸ್ಥಾನ ಪಲ್ಲಟದಿಂದ ಆಗುವ ಪರಿಣಾಮದ ಮಾಹಿತಿ

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನವಗ್ರಹಗಳಲ್ಲಿ ಮಂಗಳಗ್ರಹ ತುಂಬಾ ಪ್ರಧಾನವಾದ ಗ್ರಹ ವಾಗಿದೆ. ಮಂಗಳಗ್ರಹಕ್ಕೆ ಕುಜಗ್ರಹ, ಅಂಗಾರಕ, ಭೌಮ, ಲೋಹಿತಂಗ್, ಮಹಿಸುತ, ಹಾಗೂ ಉತ್ತರ ಭಾರತದಲ್ಲಿ ಮಾಂಗಲೀಕ ಗ್ರಹ ಎಂದು ಕರೆಯುವುದುಂಟು. ಈ ಒಂಬತ್ತು ಗ್ರಹಗಳಲ್ಲಿ ಕುಜನು ಸೂರ್ಯನಿಂದ 4ನೇ ಗ್ರಹವಾಗಿದೆ.ಈ ಮಂಗಳ ಗ್ರಹವು ಭೂಮಿಪುತ್ರ ನಾಗಿರುತ್ತಾನೆ.ಇದಕ್ಕೆ ಪುರುಷ ಗ್ರಹ ಎಂದು ಕರೆಯುವುದುಂಟು.

ಈ ಗ್ರಹವು ಅಗ್ನಿತತ್ವ, ಉಗ್ರ ಸ್ವಭಾವ, ದೇಹದಲ್ಲಿ ರಕ್ತ ಮತ್ತು ಪಿತ್ತದ ಕಾರಕ, ದಕ್ಷಿಣ ದಿಕ್ಕಿನ ಸೂಚಕ, ಸಹೋದರ ಕಾರಕ ಹೊಂದಿರುವ ಗ್ರಹವಾಗಿದೆ
ಈ ಮಂಗಳನು ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯಲ್ಲಿ ಅಧಿಪತಿಯಾಗಿರುತ್ತಾನೆ. ಮಕರ ರಾಶಿಯ ಅವನ ಉಚ್ಚ ಕ್ಷೇತ್ರ. ಮತ್ತು ಕರ್ಕವು ನೀಚ ಕ್ಷೇತ್ರ ಯಾಗಿರುತ್ತದೆ. ಮತ್ತು ಮೇಷ ಮೂಲತ್ರಿಕೋಣ ರಾಶಿಯಾಗಿದೆ.

ಕುಜ ತಾನು ಪ್ರಕಾರವಾದ ಗ್ರಹವಾಗಿದೆ ,ಅಷ್ಟೇ ಅಲ್ಲ ಶೀಘ್ರ ಶುಭ ಫಲದಾಯಕರು ಕೂಡ ಆಗಿರುತ್ತಾನೆ. ಸಂಪೂರ್ಣ ರಾಶಿಚಕ್ರವನ್ನು ಸುತ್ತಲು 18 ತಿಂಗಳು ಕಾಲಾವಕಾಶ ತೆಗೆದುಕೊಂಡಿರುತಾನ.ಎಂದರೆ ಪ್ರತಿ ರಾಶಿಯಲ್ಲಿ 45 ದಿನಗಳ ಸಂಚಾರ ಮಾಡುತ್ತಾನೆ.ಹೀಗಾಗಿ ಮಂಗಳ ಯಾರಿಗೆ ಶುಭಫಲ ನೀಡುತ್ತಾನೆ ಬನ್ನಿ ನೋಡೋಣ.

ಮೇಷ ರಾಶಿ :
ಅಪವಾದ ಮತ್ತು ಕಲಹಗಳನ್ನು ಉಂಟುಮಾಡುತ್ತಾನೆ. ಶಾರೀರಿಕ ಪೀಡೆ. ಕೌಟುಂಬಿಕ ಕಲಹ.

ವೃಷಭ ರಾಶಿ :
ಸ್ತ್ರೀಯರಿಂದ ಭಯ, ವಿರಸ, ಉದ್ಯೋಗದಲ್ಲಿ ಹಾನಿ.

ಮಿಥುನ ರಾಶಿ:
ಧನಲಾಭ, ವ್ಯವಹಾರದಲ್ಲಿ ಪ್ರಗತಿ,ಉದ್ಯೋಗದಲ್ಲಿ ಸ್ಥಾನಪಲ್ಲಟ.

ಕರ್ಕಾಟಕ ರಾಶಿ :
ಅತಿಯಾದ ಮಾನಸಿಕ ವೇದನೆ, ಅತಿಯಾದ ಕರ್ಚು, ಅತಿಯಾದ ಸಾಲ, ಜಿಗುಪ್ಸೆ ,ಆಲಸ್ಯ.

ಸಿಂಹರಾಶಿ:
ಸಾಲದಿಂದ ಋಣಮುಕ್ತಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಆರೋಗ್ಯದಲ್ಲಿ ಸುಧಾರಣೆ.

ಕನ್ಯಾ ರಾಶಿ:
ಮದುವೆ ಕಾರ್ಯ ವಿಳಂಬ, ಮಾನಸಿಕ ವೇದನೆ, ನೆಮ್ಮದಿ ಹಾಳು.

ತುಲಾ ರಾಶಿ :
ಶಾರೀರಿಕ ಪೀಡೆ,ಚಿಂತೆ, ಋಣಬಾದೆ ,ಉದ್ಯೋಗದಲ್ಲಿ ಹಾನಿ ಉಂಟಾಗುತ್ತವೆ.

ವೃಚಿಕ ರಾಶಿ:
ಅಲಸ್ಯ ,ಸಾಲದಿಂದ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು.

ಧನಸ್ಸು ರಾಶಿ:
ಮನೆ ಕಟ್ಟುವ ಚಿಂತನೆ, ಕೆಲಸದಲ್ಲಿ ಒತ್ತಡ, ಬಂಧು ಬಳಗದಿಂದ ಅಪಮಾನ.

ಮಕರ ರಾಶಿ:
ವ್ಯಾಪಾರದಲ್ಲಿ ಪ್ರಗತಿ, ಸಾಲದಿಂದ ಋಣಮುಕ್ತಿ, ಆರೋಗ್ಯದಲ್ಲಿ ಸುಧಾರಣೆ.

ಕುಂಭ ರಾಶಿ:
ಶುಭಫಲ ,ಯಶಸ್ಸು, ಸಮಾಜದಲ್ಲಿ ಗೌರವ, ನೌಕರಿಯಲ್ಲಿ ಸುಖಕರ.

ಮೀನ ರಾಶಿ:
ಬಳಗದವರಿಂದ ತೊಂದರೆ, ಕೆಲಸದಲ್ಲಿ ತೊಂದರೆಗಳು, ಉದರದ ಶಾರೀರಿಕ ಪೀಡೆಯಿಂದ ನಷ್ಟ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top