ಈ ಸಲದ ಹುಟ್ಟುಹಬ್ಬಕ್ಕೆ ಇಷ್ಟು ಪ್ರೀತಿ ಸಾಕು: ಶ್ರೀ ವಚನಾನಂದ ಸ್ವಾಮೀಜಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಇದು ಜಗತ್ತಿಗೆ ಕಷ್ಟಕಾಲ.ನನ್ನ ಸುತ್ತ ಇರುವ ಸಾವಿರಾರು ಮನಸುಗಳಲ್ಲಿ ದುಃಖ ತುಂಬಿದೆ. ಇಂಥ ದುಃಖದ ಪರಿಸ್ಥಿತಿಯಲ್ಲಿ ನಾನೊಬ್ಬ ಖುಷಿಯಾಗಿದ್ದರೆ ಆದೀತೆ? ನನ್ನ ಜನ, ನನ್ನ ಪ್ರೀತಿಪಾತ್ರರು ಹೊಟ್ಟೆಗಿಲ್ಲದೆ ಹಸಿದು ಮಲಗಿರುವಾಗ ನಾನಾದರೂ ಹೇಗೆ ಹುಟ್ಟಿದ ಹಬ್ಬ ಆಚರಿಸಿಕೊಳ್ಳಲಿ?
ಮನಸ್ಸು ಒಪ್ಪಲಿಲ್ಲ….

panchamasali samaja harihara food kit 2

‘ಹೋಗು ನಿನ್ನವರಿಗೆ ಆತ್ಮಸ್ಥೈರ್ಯ ಕೊಡು. ಅವರ ಹಸಿವು ನೀಗಿಸು. ಆತ್ಮಸ್ಥೈರ್ಯ ತುಂಬು’ ಅಂತ ಮನಸು ಆದೇಶಿಸಿತು. ನಾನು ನನ್ನ ಮನಸ್ಸಿನ ಆದೇಶವನ್ನು ಎಂದೂ ಧಿಕ್ಕರಿಸುವುದಿಲ್ಲ. ಶಿರಸಾವಹಿಸಿ ಪಾಲಿಸುತ್ತೇನೆ. ದಾರಿತಪ್ಪಿಸುವವರ ಮಾತಿಗಿಂತ ಮನಸಿನ ಮಾತು ಹಿತ ಮತ್ತು ಮುಖ್ಯ.
ರಾಣೆಬೆನ್ನೂರಿನ ಸುಮಾರು ಮುನ್ನೂರು ನೇಕಾರರ ಕುಟುಂಬಗಳಿಗೆ ಬೇಳೆ, ಎಣ್ಣೆ, ಸೋಪು, ಅಕ್ಕಿ, ಹಿಟ್ಟು, ಸಕ್ಕರೆ, ಚಹಾ ಪುಡಿ ಸೇರಿದಂತೆ ಎಲ್ಲವನ್ನೂ ಪ್ರೀತಿಯಿಂದ ನೀಡಿದೆ.

ಅವರ ಕಣ್ಣಲ್ಲಿ ಆನಂದ ಭಾಷ್ಪವಿತ್ತು
ಆ ಆನಂದ ಭಗವಂತನ ಕೊಡುಗೆ
ಈ ಸಲದ ಹುಟ್ಟುಹಬ್ಬಕ್ಕೆ ನನಗೆ ಇಷ್ಟು ಪ್ರೀತಿ ಸಾಕು..!

panchamasali samaja harihara food kit 3

ಪೂಜ್ಯ ಶ್ರೀ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರಿಗೆ, ಶಾಸಕ  ಅರುಣ ಪೂಜಾರರವರಿಗೆ,  ಚಂದ್ರಶೇಖರ ಪೂಜಾರ, ಕರಿಬಸಪ್ಪ ಹಾಗೂ ಸಕಲ ಸದ್ಭಕ್ತರಿಗೆ ಅನಂತ ಧನ್ಯವಾದವುಗಳು.

-ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *