ಡಿವಿಜಿ ಸುದ್ದಿ,ಬೆಳಗಾವಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಈಗಾಗಲೇ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದು. ಇದೀಗ ಹಾಲಿನ ಮೇಲೆ ಕೊರೊನಾ ಪರಿಣಾಮ ಬಿದ್ದಿದೆ. ರೈತರಿಂದ ಹಾಲು ಪಡೆದು ಬೇರೆ ಬೇರೆ ಕಡೆ ಸರಬರಾಜು ಮಾಡುತ್ತಿದ್ದ ಗೌಳಿ ಸಮುದಾಯ, ಕೊಳ್ಳುವರಿಲ್ಲದೆ ಹಾಲನ್ನು ಹರಿಯುವ ನೀರಿಗೆ ಸುರಿದಿದ್ದಾರೆ.
ಜಿಲ್ಲೆಯ ರಾಯಭಾಗ ತಾಲೂಕಿನ ಪಾಲಭಾಂವಿಯಲ್ಲಿ 1,500ಕ್ಕೂ ಹೆಚ್ಚು ಲೀಟರ್ ಹಾಲನ್ನು ನೀರು ಸುರಿದಿದ್ದಾರೆ. ಈ ಹಿಂದೆ ರೈತರರೂಪಾಯಿಯಂತೆ ಈ ಸಮುದಾಯ ಖರೀದಿ ಮಾಡುತ್ತಿತ್ತು .ಅದೇ ರೀತಿ ಆಕಳ ಹಾಲನ್ನು 22 ರೂಪಾಯಿಯಂತೆ ಪ್ರತಿ ಲೀಟರಿಗೆ ಖರೀದಿ ಮಾಡುತ್ತಿತ್ತು.
ಇದೀಗ ಹಾಲಿನ ಬೆಲೆ 10 ರೂಪಾಯಿಗೆ ಕುಸಿದಿದ್ದರಿಂದ ಕಾಲುವೆಗೆ ಸುರಿಯುತ್ತಿದ್ದಾರೆ. ಕೆಎಂಎಫ್ ಕೂಡ ಈ ಯುವಕರು ಸಂಗ್ರಹಿಸಿದ ಹಾಲು ಖರೀದಿಗೆ ಮುಂದಾಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.



