ಚನ್ನಗಿರಿ: ತಾಲ್ಲೂಕಿನ ಕೆರೆಬಿಳಚಿ ಗ್ರಾಮದ ಭದ್ರಾ ನಾಲೆ ಸಮೀಪ ಬೈಕ್ ಸವಾರರ ಮೇಲೆ ಚಿರೆ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬನಿಗೆ ಗಾಯವಾದ ಘಟನೆ ನಡೆದಿದೆ.
ದಾವಣಗೆರೆ: ಅಕ್ರಮ ಗಾಂಜಾ ಮಾರಾಟ; ಇಬ್ಬರು ಆರೋಪಿಗಳ ಬಂಧನ
ಮುಂಜಾನೆ ಗ್ರಾಮದ ಮುಸಿಯದ್ ಮತ್ತು ಮಕ್ಸೂದ್ ಎಂಬ ಸಹೋದರರು ತೋಟಕ್ಕೆ ನೀರು ಹಾಯಿಸಲು ಬೈಕ್ನಲ್ಲಿ ತೆರಳುವಾಗ ಭದ್ರಾ ನಾಲೆಯಲ್ಲಿ ಚಿರತೆ ಮರಿ ನೀರು ಕುಡಿಯುವುದನ್ನು ಗಮನಿಸಿದ್ದಾರೆ.ಈ ವೇಳೆ ಪಕ್ಕದ ತೋಟದಿಂದ ಚಿರತೆಯೊಂದು ಏಕಾಏಕಿ ಬಂದು ಹಿಂಬದಿ ಸವಾರ ಮಕ್ಸೂದ್ ಮೇಲೆ ದಾಳಿ ನಡೆದಿದೆ.
ಇಬ್ಬರು ಸಹೋದರರು ವಾಹನದಿಂದ ಕೆಳಗೆ ಬಿದ್ದಾಗ ಬೈಕ್ ಶಬ್ಧಕ್ಕೆ ಹೆದರಿ ಚಿರತೆ ಓಡಿಹೋಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಬೋನ್ ಅಳವಡಿಸುವಂತೆ ರೈತರು ಆಗ್ರಹಿಸಿದ್ದಾರೆ.



