ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿದೆ. ಒಂದು ಬಣ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದರೆ, ಮತ್ತೊಂದು ಬಣ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದೆ. ಈ ಎರಡು ಬಣ ಬಡಿದಾಟ ಕಂಡು ಚುನಾವಣಾ ಉಸ್ತುವಾರಿ ಸಮಿತಿ ಹೈರಾಣವಾಯಿತು.
ಟಿಕೆಟ್ ವಿಚಾರವಾಗಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಎರಡು ಬಣಗಳ ನಡುವೆ ಬಾರಿ ಗದ್ದಲ-ಗಲಾಟೆ ಇಂದು (ಮಾ.17) ನಡೆದಿದೆ.
ದಾವಣಗೆರೆ: ಮಾದರಿ ನೀತಿ ಸಂಹಿತೆ ಜಾರಿ: ಮಾ. 23ರವರೆಗ ದು ನಾಮಪತ್ರ ಸಲ್ಲಿಕೆಗೆ ಅವಕಾಶ-ಮಾ.26 ಹಿಂಪಡೆಯಲು ಕೊನೆ ದಿನ
ಒಂದು ಬಣ ಅಹಿಂದ ವರ್ಗದವರಿಗೆ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತರಿಗೆ) ಟಿಕೆಟ್
ಕೊಡಿ ಎಂದು ಘೋಷಣೆ ಕೂಗಿದರೆ, ಇನ್ನೊಂದು ಬಣ ಶಾಮನೂರು ಶಿವಶಂಕರ್ ಮೊಮ್ಮಗ ಸಮರ್ಥ್ (ಸಚಿವ ಮಲ್ಲಿಕಾರ್ಜುನ ಪುತ್ರ) ಅವರಿಗೆ ಟಿಕೆಟ್ ಕೊಡಿ ಎಂದು ಪರಸ್ಪರ ಘೋಷಣೆ ಕೂಗಿದ್ದರಿಂದ ಕೆಲ ಹೊತ್ತು ಗೊಂದಲ-ಗಲಾಟೆ ವಾತಾವರಣ ನಿರ್ಮಾಣವಾಗಿತ್ತು.
ಒಂದೇ ಫ್ಯಾಮಿಲಿ ಎಷ್ಟು ಟಿಕೆಟ್ ನೀಡುತ್ತೀರಿ..? ಈಗಾಗಲೇ ಶಾಮನೂರು ಕುಟುಂಬಕ್ಕೆ ಸಂಸದರು, ಸಚಿವ ಸ್ಥಾನ ನೀಡಲಾಗಿದೆ. ಮತ್ತೆ ಅವರಿಗೆ ಟಿಕೆಟ್ ನೀಡಿದ್ರೆ ಹೆಚ್ಚಿನ ಮತದಾರರಿರುವ ಅಲ್ಪಸಂಖ್ಯಾತರು ಎಲ್ಲಿ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯಲ್ಲಿದ್ದ ಮಂಜುನಾಥ್ ಭಂಡಾರಿ, ಎಚ್. ಎಂ. ರೇವಣ್ಣ ಸೇರಿದಂತೆ ಇನ್ನಿತರ ಮುಖಂಡರು ಎಷ್ಟೇ ಸಮಾಧಾನಗೊಳಿಸಲು ಯತ್ನಿಸಿದರೂ ಎರಡೂ ಬಣಗಳ ಗಲಾಟೆ ನಿಯಂತ್ರಣಕ್ಕೆ ಬಾರಲಿಲ್ಲ. ಒಬ್ಬೊಬ್ಬರ ಅಹವಾಲು ಆಲಿಕೆ ಕೈಬಿಟ್ಟು ಲಿಖಿತ ಅಭಿಪ್ರಾಯಗಳಷ್ಟನ್ನೇ ಪಡೆದು ಉಸ್ತುವಾರಿ ಸಮಿತಿ ಬೆಂಗಳೂರು ಕಡೆ ಹೊರಟು ಹೋದರು.



