ಸದನಕ್ಕೆ ತಪ್ಪು ಉತ್ತರ ನೀಡಿ ಪೇಚಿಗೆ ಸಿಲುಕಿದ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್: ವಿಪಕ್ಷ ತರಾಟೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಬೆಂಗಳೂರು: ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಪ್ಪು ಉತ್ತರ‌ ನೀಡಿ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು. ಇದಕ್ಕೆ ವಿಪಕ್ಷ ನಾಯಕರು ತರಾಟೆ ತಗೆದುಕೊಂಡರು.

ದಾವಣಗೆರೆ: ಬೆಂಕಿ ಅವಘಡ; 4.75 ಲಕ್ಷ ಮೌಲ್ಯದ ರಾಶಿ ಮೆಕ್ಕೆಜೋಳ ಸುಟ್ಟು ಭಸ್ಮ

ಇಂದು (ಮಾ.13) ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ ಸಚಿವ ಮಲ್ಲಿಕಾರ್ಜುನ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷ ಪ್ರಸ್ತಾಪಿಸಿದರು. ಈ ವೇಳೆ ಸಚಿವರ ಉತ್ತರದ ಅಂಕಿ ಅಂಶಗಳಿಗೆ ವಿಪಕ್ಷ ಬಿಜೆಪಿ ಶಾಸಕ ಸುನಿಲ್ ಕುಮಾರ್, ‘ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಬಿಡುಗಡೆಯಾದ ಹಾಗೂ ಬಳಕೆಯಾದ ಹಣದ ಬಗ್ಗೆ ಮಾಹಿತಿ ನೀಡಿದ್ದೀರಿ. 16,866 ಜನರಿಗೆ 5.53 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಒಂದು ಉತ್ತರ ನೀಡಿದ್ದಾರೆ.

ದಾವಣಗೆರೆ: ನಕಲಿ‌ನೋಟು‌ ತಯಾರಿಸಿ ಚಲಾವಣೆ; ಆರೋಪಿಗಳಿಗೆ 5 ವರ್ಷ ಶಿಕ್ಷೆ, 40 ಸಾವಿರ‌‌ ದಂಡ

ಯಾವ ಉತ್ತರ ನಂಬಬೇಕು..?

ಉತ್ತರ ಕನ್ನಡ ಜಿಲ್ಲೆಯಲ್ಲಿ 22,167 ಜನರಿದ್ದಾರೆ ಅಂತಾ ನೀವೇ ಹೇಳಿದ್ದೀರಿ. ಒಂದು ಕಡೆ ರಾಜ್ಯದಲ್ಲಿ 16 ಸಾವಿರ ಅಂತಾ ಹೇಳಿ ಮತ್ತೊಂದು ಕಡೆ 22 ಸಾವಿರ ಕೋಟಿ ಅಂತಾ ಹೇಳ್ತಿದ್ದೀರಿ. ಈ ಸಾಲಿನ ಆಯವ್ಯಯದ ವರದಿಯಲ್ಲಿ 62 ಕೋಟಿಯನ್ನ ಎಲೆಚುಕ್ಕೆ ರೋಗಕ್ಕೆ ಒದಗಿಸಿದ್ದೇವೆ ಅಂತಾ ವರದಿಯಲ್ಲಿ ಹೇಳಿದ್ದಾರೆ. 10,272 ರೈತರಿಗೆ ನಾವು ಪರಿಹಾರ ನೀಡಿದ್ದೇವೆ ಅಂತಾ ಹೇಳಿದ್ದೀರಿ. ನಿಮ್ಮ ಉತ್ತರದಲ್ಲಿ 16 ಸಾವಿರ ಅಂತಾ ಇದೆ. ಉ.ಕ ಜಿಲ್ಲೆಯಲ್ಲಿ 22 ಸಾವಿರ ಅಂತಾ ಹೇಳುತ್ತೀರಿ ಇದರಲ್ಲಿ ಯಾವುದನ್ನ ನಂಬಬೇಕು’ ಎಂದು ತರಾಟೆಗೆ ತೆಗೆದುಕೊಂಡರು.

ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ‌‌‌‌ ಚುನಾವಣೆ; ದಾವಣಗೆರೆ ಕೆ.ಎಂ. ಸುರೇಶ್‌ ಬಿಜೆಪಿ ಅಭ್ಯರ್ಥಿ

ಬಜೆಟ್  ಪುಸ್ತಕಕ್ಕೂ ಸಚಿವರ ಉತ್ತಕ್ಕೂ ವ್ಯತ್ಯಾಸ

ಬಜೆಟ್ ಗೂ ನಿಮ್ಮ ಇಲಾಖೆಗೂ ಡಿಸ್ ಲಿಂಕ್ ಆಗಿದೆಯಾ ? ಎಲೆಚುಕ್ಕೆ ರೋಗದಿಂದ ಅಲ್ಲಿ ಜನ ಸಾಯುತ್ತಿದ್ದರೆ. ಇಲ್ಲಿ ನೀವು ಸುಳ್ಳು ಹೇಳುತ್ತೀರಾ ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.ಈ ವೇಳೆ ನಾವು ಸುಳ್ಳು ಲೆಕ್ಕ ನೀಡಿಲ್ಲ ಅಂತ ಸಬೂಬು ನೀಡಲು ಸಚಿವ ಮಲ್ಲಿಕಾರ್ಜುನ್ ಮುಂದಾದರು. ನಾವು 8.61 ಕೋಟಿ 5.53 ಕೋಟಿ ಕೊಟ್ಟಿದ್ದೇವೆ. ಈಗ ಜಿಲ್ಲಾವಾರು ನೀಡಿರುವ ಪ್ರಸ್ತಾವನೆ ಕಳುಹಿಸಿದ್ದೇವೆ. ಕೇಂದ್ರದ ಪಾಲು ಇದೆ ಅದನ್ನೂ ಕಳಿಸಿದ್ದೇವೆ. ಇದರಲ್ಲಿ ಯಾವ ಮುಚ್ಚು ಮರೆ ಇಲ್ಲ ಎಂದ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್ ಸಮರ್ಥಿಸಿಕೊಂಡರು.

ಸಚಿವರ ಮಾತಿಗೆ ಸಮಾಧಾನಗೊಳ್ಳದ ಬಿಜೆಪಿ ಸುನಿಲ್ ಕುಮಾರ್, ಇಡೀ ರಾಜ್ಯದಲ್ಲಿ 16 ಸಾವಿರ ಜ‌ನ ಅಂತ ಹೇಳ್ತಿದ್ದಿರಿ. ಆದರೆ ಉತ್ತರದಲ್ಲಿ 22 ಸಾವಿರ ಜನ ಅಂತ ಹೇಳಿದ್ದೀರಾ ಎಂದು ಪ್ರಶ್ನಿಸಿದರು.

ಸರಿಯಾದ ಉತ್ತರ ನೀಡುವಂತೆ ಸೂಚನೆ

ಕೊನೆಗೆ ಗೊಂದಲಕ್ಕೆ ತೆರೆ ಎಳೆಯಲು ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ಮಾಹಿತಿ ಪಡೆದು ಗೊಂದಲ ಬಗೆಹರಿಸಿ ಎಂದು ಸಚಿವರಿಗೆ ಸಲಹೆ ನೀಡಿದರು. ಅಲ್ಲದೆ, ಇದೇ ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ಕೊಡುವಂತೆ ಸಚಿವರಿಗೆ ತಾಕೀತು ಮಾಡಿದರು.

ಸದನಕ್ಕೆ ತಪ್ಪು ಉತ್ತರ ವಾಪಸ್ ಪಡೆಯಲಿ

ಎಲ್ಲದಕ್ಕೂ ಹೀಗೆ ಮಾಡಬೇಡಿ, ನಾವು ಬಜೆಟ್ ಬುಕ್ ಹಿಡಿದು ಚರ್ಚೆ ಮಾಡ್ತೇವೆ. ನೀವು ಉತ್ತರ ಕೊಡಿಸಬೇಕು, ಸದನಕ್ಕೆ ತಪ್ಪು ಉತ್ತರ ಕೊಟ್ಟರು ಹೇಗೆ ಸುಮ್ಮನಿರೋದು. ಇಲ್ಲ ಉತ್ತರವನ್ನ ವಾಪಸ್ ಪಡೆಯಲಿ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *