ದಾವಣಗೆರೆ: ಜಿಲ್ಲಾಡಳಿತ ಒಂದು ಮನೆಯ ಸೇವಕರಂತೆ ವರ್ತಿಸುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಸಾಮಾಜಿಕ ಜಾಲತಾಣದ ಮೂಲಕ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ದಾವಣಗೆರೆ: ಪೊಲೀಸರ ಭರ್ಜರಿ ಕಾರ್ಯಚರಣೆ; ಕಳ್ಳತನವಾಗಿದ್ದ 2.80 ಲಕ್ಷ ಬೆಲೆಯ 5 ಬೈಕ್ ವಶ
ಈ ಕುರಿತು ವೀಡಿಯೋ ಸಂದೇಶದಲ್ಲಿ ಮಾತನಾಡಿ, ಜಿಲ್ಲಾಡಳಿತದ ಕಾರ್ಯವೈಖರಿ ಹಾಗೂ ಶಿಷ್ಟಾಚಾರದ ಉಲ್ಲಂಘನೆ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ.
ನನ್ನ ನಂಬರ್ ಬ್ಲಾಕ್ ಲಿಸ್ಟ್ನಿಂದ ತೆಗೆಯಿರಿ
ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸದೇ ನಿರ್ಲಕ್ಷಿಸುತ್ತಿದ್ದಾರೆ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ಸಂಸದರಿಗಾಗಿ ಗಂಟೆಗಟ್ಟಲೆ ತಡವಾಗಿ ಆರಂಭಿಸುತ್ತಿದ್ದಾರೆ ಎಂದು ದೂರಿದರು.
ದಾವಣಗೆರೆ: ಕೊಲೆ ಪ್ರಕರಣದಲ್ಲಿ 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಶನಿವಾರ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ತಾವು 11.30 ಕ್ಕೆ ಹೋದರೂ ಉದ್ಘಾಟನೆ ನಡೆದಿರಲಿಲ್ಲ. ಸುಮಾರು 10 ನಿಮಿಷ ಕಾದು ಅಲ್ಲಿದ್ದ ಮಹಿಳೆಯರಿಗೆ ಶುಭ ಕೋರಿ ತಾವು ಮುಂದಿನ ಕಾರ್ಯಕ್ರಮಕ್ಕೆ ತೆರಳಿದ್ದಾಗಿ ತಿಳಿಸಿದ್ದಾರೆ.
ಸಂಸದರಿಗಾಗಿ ಗಂಟೆಗಟ್ಟಲೇ ಕಾಯುವ ಜಿಲ್ಲಾಡಳಿತ
ಜಿಲ್ಲಾ ಸಚಿವರು ಬರುವುದಾದರೆ ನಾವು ಅರ್ಧ ಗಂಟೆ ಕಾಯುತ್ತೇವೆ. ಆದರೆ ಸಂಸದರಿಗಾಗಿ ಇಡೀ ಜಿಲ್ಲಾಡಳಿತ ಗಂಟೆಗಟ್ಟಲೇ ಕಾಯುವುದು ಎಷ್ಟು ಸರಿ..? ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಇದು ಅರಿವಿಗೆ ಬರುತ್ತಿಲ್ಲವೇ…? ಎಂದು ಪ್ರಶ್ನಿಸಿದ್ದಾರೆ.
ಕ್ರೀಡಾಕೂಟಗಳ ಸಂದರ್ಭದಲ್ಲೂ ಕ್ರೀಡಾಪಟುಗಳು ಬಿಸಿಲಿನಲ್ಲಿ ಕಾಯುವಂತಾಗುತ್ತಿದೆ. ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಕನಿಷ್ಠ ಸೌಜನ್ಯವನ್ನೂ ಜಿಲ್ಲಾಡಳಿತ ತೋರುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿಗಳೇ, ನೀವು ಒಂದು ಮನೆಯ ಸೇವಕರಂತೆ ವರ್ತಿಸುತ್ತಿದ್ದೀರಾ. ನೀವು ಜಿಲ್ಲೆಗೆ ಬಂದ ಮೇಲೆ ಅನ್ಯಾಯಗಳು ಹೆಚ್ಚಾಗಿವೆ. ನನ್ನ ಫೋನ್ ನಂಬರ್ ಅನ್ನು ನೀವು ಬ್ಲಾಕ್ ಲಿಸ್ಟ್ ಗೆ ಹಾಕಿದ್ದೀರಾ. ನ್ಯಾಯ ಕೇಳುವ ಶಾಸಕರೆಂದರೆ ನಿಮಗೆ ಭಯವೇ? ಎಂದು ಹರೀಶ್ ನೇರವಾಗಿಯೇ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತದ ವಿರುದ್ಧ ಬೃಹತ್ ಹೋರಾಟ
ಚುನಾಯಿತ ಪ್ರತಿನಿಧಿಗಳ ಕರೆಗಳನ್ನು ನಿರ್ಲಕ್ಷಿಸಬಾರದು ಎಂಬ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಆದೇಶವನ್ನು ಪಾಲಿಸಬೇಕು. ಕೂಡಲೇ ನನ್ನ ನಂಬರ್ ಅನ್ನು ಬ್ಲಾಕ್ ಲಿಸ್ಟ್ ನಿಂದ ತೆಗೆಯಬೇಕು ಎಂದು ಹರೀಶ್ ಆಗ್ರಹಿಸಿದ್ದಾರೆ.ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗದಿದ್ದರೆ ಜಿಲ್ಲಾಡಳಿತದ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿ.ಪಿ. ಹರೀಶ್ ಎಚ್ಚರಿಕೆ ನೀಡಿದ್ದಾರೆ.



