ದಾವಣಗೆರೆಯಲ್ಲಿ ಅದ್ಧೂರಿ ಹೋಳಿ ಸಂಭ್ರಮ; ಬಣ್ಣದೋಕುಳಿಯಲ್ಲಿ ಕುಣಿದು ಕುಪ್ಪಳಿಸಿದ ಯುವ ಪಡೆ..!!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಬೆಣ್ಣೆ‌ನಗರಿ ದಾವಣಗೆರೆಯಲ್ಲಿ  ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.‌ ನಗರದ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಹೋಳಿ‌ ಹಬ್ಬದ ಜೋಶ್ ಜೋರಾಗಿಯೇ ಇತ್ತು.‌ ನಗರದೆಲ್ಲಡೆ ಯುವಕ, ಯುವತಿಯರು ಮಕ್ಕಳು ಬಣ್ಣದೋಕುಳಿ ಎರಚಿ ಸಂಭ್ರಮಿಸಿದರು.

ದಾವಣಗೆರೆ: ಮನೆ ಕಳ್ಳತನ; ಆರೋಪಿ ಬಂಧನ- 3.42 ಲಕ್ಷ ಮೌಲ್ಯದ ಸ್ವತ್ತು ವಶ

ನಗರದ ಪ್ರಮುಖ ರಸ್ತೆಗಳಿಂದ ಬಣ್ಣದ ಓಕಳಿಯನ್ನು ಒಬ್ಬರಿಗೊಬ್ಬರು, ಹಚ್ಚುತ್ತಾ‌ ರಾಮ್ ಅಂಡ್ ಕೋ ಸರ್ಕಲ್ ಕಡೆ ಬಂದು ಸಂಭ್ರಮಿಸಿದರು. ಡಿಜೆ ಸೌಂಡ್ ಕನ್ನಡ, ಹಿಂದಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಯುವಕ-ಯುವತಿಯರು, ಜೋರು ಕೇಕೆ..‌ಹಾಕಿ ಕುಣಿದು ಒಬ್ಬರಿಗೊಬ್ಬರು ಬಣ್ಣ‌ ಹಚ್ಚಿಕೊಂಡರು. ರಾಮ್ ಅಂಡ್ ಕೋ ವೃತ್ತದಲ್ಲಿ ಮಧ್ಯಾಹ್ನದವರೆಗೆ ಯುವಕ – ಯುವತಿಯರು ಕುಣಿದು ಸಂತಸಪಟ್ಟರು.

ದಾವಣಗೆರೆ: ಬಿಜೆಪಿಯಲ್ಲಿ‌ ಮತ್ತೆ ಭಿನ್ನಮತ ಸ್ಫೋಟ; ಮಾ.5ರಂದು ಭಿನ್ನಮತರ ಸಭೆ ; ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪ

ನಿನ್ನೆ (ಮಾ.03) ರಾತ್ರಿ ಕಾಮದಹನ ಮಾಡಿದ ಬಳಿಕ ಬಣ್ಣದೋಕುಳಿಯ ಸಂಭ್ರಮಕ್ಕೆ ಚಾಲನೆ ದೊರೆತಿತ್ತು. ರಾಮ್ ಅಂಡ್ ಕೋ ವೃತ್ತದಲ್ಲಿ ಹೋಳಿ ಹಬ್ಬಕ್ಕೆ ವಿಶೇಷವಾಗಿ‌‌ ಸಜ್ಹುಗೊಳಿಸಲಾಗಿತ್ತು. ಮಕ್ಕಳು, ಯುವಕರ ಎನ್ನದೆ ಎಲ್ಲರು ಬಣ್ಣ ಓಕಳಿಯಲ್ಲಿ ಸಂಭ್ರಮಿಸಿದರು. ಶಾಲೆ, ಕಾಲೇಜ್ವಗಳಿಗೆ ರಹೆ ಇದ್ದ ಕಾರಣ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜ್‌, ಯುಬಿಡಿಟಿ ಕಾಲೇಜು, ಬಿಐಇಟಿ ಕಾಲೇಜು ಸಹಿತ ವಿವಿಧ ಹಾಸ್ಟೆಲ್‌ಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದಾಟದಲ್ಲಿ ಮುಳುಗಿದ್ದರು. ಇನ್ನೂ‌ ಪಿ.ಜೆ. ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌, ವಿನೋಬನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಬಿಐಇಟಿ ರಸ್ತೆ, ನಿಜಲಿಂಗಪ್ಪ ಬಡಾವಣೆ, ಬಿಡಿಟಿ ರಸ್ತೆ, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ರಸ್ತೆ, ಸಿದ್ದವೀರಪ್ಪ ಬಡಾವಣೆ, ಗಡಿಯಾರ ಕಂಬ, ಹಳೆ ದಾವಣಗೆರೆ, ಹೊಂಡದ ಸರ್ಕಲ್, ದೇವರಾಜ ಅರಸು ಬಡಾವಣೆ, ಆಂಜನೇಯ ಬಡಾವಣೆ, ಗಾಂಧಿ ವೃತ್ತ, ವಿನೋಬನಗರ, ಕಾಯಿಪೇಟೆ, ನಿಟುವಳ್ಳಿಯಲ್ಲಿ ಹೋಳಿ ಸಂಭ್ರಮಾಚರಣೆ ಜೋರಾಗಿತ್ತು. ಕೆಲವು ಕಡೆ ಯುವಕರು, ಸಂಘಟನೆ ನೇತೃತ್ವದಲ್ಲಿ ಸಾಮೂಹಿಕ ಹೋಳಿ ಆಚರಣೆಗೆ ವ್ಯವಸ್ಥೆ ಕಲ್ಪಿಸಿದ್ದರು.

ಹೋಳಿ ಸಂಭ್ರಮ ಹಿನ್ನೆಲೆ ಕೆಲ ರಸ್ತೆಗಳಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *