ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕುಡಿಯೋ ನೀರಿಲ್ಲದೆ ಜನರು ಬೇಸತ್ತಿದ್ದು, ಗ್ರಾಪಂ ಅಧಿಕಾರಿ ಈ ಕೂಡಲೇ ನೀರು ಸರಬರಾಜು ಮಾಡದಿದ್ದರೆ, ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಡಾ. ವಿಷ್ಣು ಸೇನಾ ಸಮಿತಿ ಎಚ್ಚರಿಕೆ ನೀಡಿದೆ.
ಚೌಡೇಶ್ವರಿ ದೇವಸ್ಥಾನ, ಮಸೀದಿ ಗಲ್ಲಿಗಳಲ್ಲಿ ಜನರು ನೀರಿಗಾಗಿ ಪರಸ್ಪರ ಜಗಳಕಾಯೋ ದುಸ್ಥಿತಿ ನಿಮಾ೯ಣವಾಗಿದೆ. ಗ್ರಾಮ ಪಂಚಾಯ್ತಿಯವರು ಜನರ ಕೆಲಸ ಮಾಡದು ಬಿಟ್ಟು ರಾಜಕಾರಣಿಗಳ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಊರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂದು ಗ್ರಾಮ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಮೂರು ತಿಂಗಳುಗಳಿಂದಲೂ ಸರಿಯಾಗಿ ನೀರು ಒದಗಿಸುತ್ತಿಲ್ಲ. ಸಂಬಂಧಿಸಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂಧಿಸುತ್ತಿಲ್ಲ ಕಾರಣ ಗ್ರಾಮಸ್ಥರ ಸಹಯೋಗದೊಂದಿಗೆ ಗ್ರಾಮಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಡಾವಿಷ್ಣು ಸೇನಾ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ರಾಜ್ಯದ ಮಾದರಿಗ್ರಾಮವಾಗಿತ್ತು. ಆದರೆ, ಈಗ ಸಮಸ್ಯೆ ಗಳನ್ನುಹೊತ್ತ ಗ್ರಾಮವಾಗುತ್ತಿದೆ. ಮಾಜಿ ಶಾಸಕ ರೋವ೯ರು ಸೇರಿದಂತೆ ಜಿ ಪಂ.ತಾಪಂ ಹಾಗೂ ಪ್ರಭಾವಿಗಳು ವಾಸವಿದ್ದಾರೂ ಸಾಮಾನ್ಯ ಜನರ ಕೂಗು ಆಲಿಸೋರು ಇಲ್ಲದಂತಾಗಿದೆ ಎಂದು ಗ್ರಾಮದ ಜೆಬಿನಾಬೀ, ಶಾಬಾನಾ. ಮಾರಣ್ಣ, ದಿಲ್ಶಾದ್, ಸಿದ್ದಪ್ಪ, ಲಕ್ಷ್ಮಿಮ್ಮ, ಮೈಮುನ್ನಾಬೀ, ಖಾಜಾಸಾಬ್, ಹಸೇನ್ ಸಾಬ್, ಹನುಮಕ್ಕ, ಸುಮಂಗಳ, ಜೆಬಿಲಮ್ಮ, ಮಂಜಮ್ಮ, ಮುನಿಯಮ್ಮ, ಮಾಂತಮ್ಮ, ಮಲ್ಲಜ್ಜಿ, ಚೌಡಕ್ಕ, ಮುಂತಾದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಸಂಪಕಿ೯ಸಲು ಪ್ರಯತ್ನಿಸಿದ್ದು ಅಧಿಕಾರಿ
ಫೋನ್ ನಾಟ್ ರೀಚಬಲ್ ಆಗಿದೆ. ಗ್ರಾದಲ್ಲಿರೋ ವಾಟರ್ಮ್ಯಾನ್ ನೋ ರೆಸ್ಪಾನ್ಸ್. ಇನ್ನು ಜನಪ್ರತಿನಿಧಿಗಳು ರಬ್ಬರ್ ಸ್ಟಾಂಪಗಳು. ಸಾಮಾನ್ಯ ಜನರಗೋಳು ಕೇಳೋರಿಲ್ಲ..ಇದು ಕೇವಲ ಚಿಕ್ಕ ಜೋಗಿಹಳ್ಳಿ ಯ ಗೊಳು ಮಾತ್ರವಲ್ಲ ತಾಲೂಕಿನ ಬಹುತೇಕ ಗ್ರಾಮಗಳ ಗೋಳಾಗಿದೆ ಎಂದು ವಿಷ್ಣು ಸೇನಾ ಸಮಿತಿ ಉಪಾಧ್ಯಕ್ಷ ಸಾಧಿಕ್ ಬೇಸರ ವ್ಯಕ್ತಪಡಿಸಿದ್ದಾರೆ.



