ದಾವಣಗೆರೆ: ತಪ್ಪು ಮಾಡಿದ್ರೆ ಕಾನೂನು ಕ್ರಮಕ್ಕೆ ಸಿದ್ಧ; ದಾದಾಗಿರಿಗೆ ಬಗ್ಗುವುದಿಲ್ಲ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಅಕ್ರಮವಾಗಿ ಮಣ್ಣು ಸಾಗಣೆ ಮಾಡಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಎದುರಿಸಲು ನಾನು ಸಿದ್ಧನಿದ್ದೇನೆ. ಆದರೆ, ದಾದಾಗಿರಿಗೆ ಬಗ್ಗುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಶಾಸಕ ಬಿ.ಪಿ. ಹರೀಶ್ ಮಾಡಿದ ಆರೋಪ ವಿರುದ್ಧ ಕಿಡಿಕಾರಿದರು.

ಶಾಸಕ ಬಿ.ಪಿ. ಹರೀಶ್ ಇದೇ ರೀತಿ ಮಾತು ಮುಂದುವರಸಿದ್ರೆ ಕಲ್ಲಲ್ಲಿ ಹೊಡಿತೀವಿ; ಹರಿಹರ ಮಾಜಿ ಶಾಸಕ ರಾಮಪ್ಪ ಕಿಡಿ

ನೆಲ ಸಮ ಮಾಡಲು ಗುತ್ತಿಗೆ

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ‌ ನಡೆಯುವ ನೆಲ ಸಮ ಮಾಡಲು ಗುತ್ತಿಗೆ ನೀಡಲಾಗಿತ್ತು. ಮಣ್ಣು ಅಕ್ರಮವಾಗಿ ಸಾಗಣೆ ಮಾಡಿದ್ದರೆ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ತಿರುಗೇಟು ನೀಡಿದರು.

ದಾವಣಗೆರೆ: ಅಂಘಟಿತ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ಪಿಂಚಣಿ; ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನೋಂದಣಿ ಹೇಗೆ..?

ಗುತ್ತಿಗೆ ಪಡೆದವರನ್ನು ಹಿಡಿದು ಕೇಳಲಿ

ಕಾರ್ಯಕ್ರಮ ನಡೆದ ಸ್ಥಳ ನನ್ನ ಒಬ್ಬನಿಗೆ ಸೇರಿದಲ್ಲ, ಅನೇಕ ರೈತರು ಇದ್ದಾರೆ. ಅವರು ಸಹ ಮಣ್ಣು ತಂದು ಸಮ ಮಾಡಿದ್ದಾರೆ. ನೆಲ ಸಮ ಮಾಡಲು ಗುತ್ತಿಗೆ ಪಡೆದವರನ್ನು ಹಿಡಿದು ಕೇಳಿದರೆ ಅಕ್ರಮವೋ, ಸಕ್ರಮವೋ ಗೊತ್ತಾಗುತ್ತೆ. ಈ ಪ್ರಕರಣದಲ್ಲಿ ನಾನುವ ತಪ್ಪು ಮಾಡಿದ್ದರೆ ಕಾನೂನು ಕ್ರಮ ಎದುರಿಸಲು ನಾನು ಸಿದ್ಧನಿದ್ದೇನೆ.ಇಂತಹ ದಾದಾಗಿರಿಗೆ ಬಗ್ಗಲ್ಲ ಎಂದರು.

ಜಾತಿ ನಿಂದನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ನನ್ನ ಮೇಲೆ ಕಪ್ಪುಚುಕ್ಕೆ ಇಲ್ಲ

ಹರಿಹರ ಶಾಸಕ ಬಿ.ಪಿ. ಹರೀಶ್‌ ವ್ಯಕ್ತಿಯೊಬ್ಬರನ್ನು ನಿಂದನೆ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಸಂತ್ರಸ್ತ ಕೇಸ್ ದಾಖಲಿಸಿದ್ದಾರೆ. ಜಾತಿ ನಿಂದನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಈ ಒ್ರಕರಣದಲ್ಲಿ ಬಂಧಿಸುವಂತೆ ಯಾರಿಗೂ ನಾನು ಸೂಚನೆ ಕೊಟ್ಟಿಲ್ಲ. ಮೂರು ಬಾರಿ ಸಚಿವನಾಗಿದ್ದೇನೆ. ಒಂದು ಕಪ್ಪುಚುಕ್ಕೆ ಅಂಟಿಸಿಕೊಂಡಿಲ್ಲ ಎಂದರು.

ಹರೀಶ್‌ ಸಂಸ್ಕಾರ ಕಲಿಯಬೇಕು

ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸುವುದು ಸರಿಯಲ್ಲ. ಇದು ಒಳ್ಳೆ ರಾಜಕಾರಣಿ ಲಕ್ಷಣವಲ್ಲ. ಬಿ.ಪಿ. ಹರೀಶ್‌ ಸಂಸ್ಕಾರ ಕಲಿಯಬೇಕು. ಚಿಕ್ಕಂದಿನಲ್ಲಿ ನಮ್ಮೊಂದಿಗೆ ಕ್ರಿಕೆಟ್‌ ಆಡುವಾಗಲೂ ಹರೀಶ್‌ ಹೀಗೆಯೇ ನಡೆದುಕೊಳ್ಳುತ್ತಿದ್ದ ಎಂದರು.

ಉಪ ಚುನಾವಣೆ ಮೇಲೆ‌ ಬಿಜೆಪಿ‌ ಕಣ್ಣು

ಮುಂಬರುವ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆ‌ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅದಕ್ಕೆ ಅನುಕಂಪ ಗಿಟ್ಟಿಸಿಕೊಳ್ಳಲು ಬಿಜೆಪಿ ರೀತಿ ಹವಣಿಸುತ್ತಿದೆ. ಚಿಕ್ಕಬಿದರೆ ಪ್ರಕರಣದ ತನಿಖೆ ವರದಿ ಶೀಘ್ರವೇ ಬರಲಿದೆ. ‌ಇದರಲ್ಲಿ ಬೇಳೆ ಬೇಯಿಸಿಕೊಳ್ಳುವವರ ಸಂಚು ಬಯಲಾಗಲಿದೆ ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು.

ಜಿಎಂ‌ ಸಿದ್ದೇಶ್ವರ ಹೆಸರು ಹೇಳದೆ ಕಿಡಿ

ಕೇಂದ್ರದ ಮಾಜಿ ಸಚಿವನನ್ನು ಲೋಕಸಭಾ ಚುನಾವಣೆಯಲ್ಲಿ ಊರಿಗ ಕಳುಹಿಸಲಾಗಿತ್ತು. ಅವತ್ತಿನಿಂದ ಈವರೆಗೆ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಉಪ ಉಪಚುನಾವಣೆ ಬರುತಗತಿದ್ದಂತೆ ಗರಿಗರಿ ಬಟ್ಟೆ ಹಾಕಿಕೊಂಡು ಹೊರಬರುತ್ತಿದ್ದಾರೆ’ ಎಂದು ಜಿ.ಎಂ. ಸಿದ್ದೇಶ್ವರ ಹೆಸರು ಹೇಳದೆ ಕಿಡಿಕಾರಿದರು..

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *