ಒಂದಾದ ತರಳಬಾಳು ಪೂಜ್ಯ ತ್ರಯರು; ಒಂದೇ ವೇದಿಕೆಯತ್ತ ಕರೆ ತಂದ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ….!!!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಧಣಿವರಿಯದ ದಾವಣಗೆರೆಯ ಕೊಡುಗೈ ಧಣಿ, ಗುರು ಸೇವಾ ಕೈಂಕರ್ಯ ನಿಷ್ಠರು, ನಮ್ಮ ಸಮಾಜದ ಆಲದ ಮರದದಂತಿದ್ದ ಶಾಮನೂರು ಶಿವಶಂಕರಪ್ಪ ಶಿವನವಾರ ಸೋಮವಾರ ದಿನವಾದ ಇಂದೇ ಮಲ್ಲಿಗೆಯ ರೂಪದಲ್ಲಿ ಶಿವನ ಪಾದಕ್ಕೆ ಸಮರ್ಪಿತರಾದರು‌.

ಶಾಮನೂರು ಶಿವಶಂಕರಪ್ಪ ಪಂಚಭೂತಗಳಲ್ಲಿ ಲೀನ: ಸಕಲ ಸರ್ಕಾರಿ ಗೌರವ‌‌; ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ- ನೆರೆದ ಅಪಾರ ಜನಸ್ತೋಮ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶಾಖಾ ಮಠದ ಸಾಣೇಹಳ್ಳಿ ಶಾಖಾ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಹರಳಕಟ್ಟ ಶಾಖಾ ಮಠ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಒಂದೇ ವೇದಿಕೆಯಲ್ಲಿ ನೋಡುವ ಆಸೆಯು ಸಮಾಜಭಾಂಧವರ ಒತ್ತಾಸೆ ನೆರವೇರಿತು.

ಶಾಮನೂರು ಶಿವಶಂಕರಪ್ಪನವರು ನಿನ್ನೆ ಸಂಜೆ ಬಯಲಾದ ಕ್ಷಣದಿಂದಲೂ ನಮ್ಮ ಶ್ರೀ ಜಗದ್ಗುರುಗಳವರು ನ್ಯಾಯ ಪೀಠವನ್ನು ರದ್ದುಮಾಡಿ ಶಾಮನೂರು ಕುಟುಂಬದೊಟ್ಟಿಗೆ ಮುಂದಿನ ವಿಧಿವಿಧಾನಗಳು ಬಗ್ಗೆ ಚರ್ಚಿಸಿದರು, ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅವರು ನಿನ್ನೆ ಸಂಜೆಯಿಂದಲೂ ದಾವಣಗೆರೆಯಲ್ಲಿ ನಡೆಯಲಿರುವ ಅಂತಿಮ ಸಂಸ್ಕಾರದ ರೂಪುರೇಷೆಗಳನ್ನು ಪರಿಶೀಲಿಸಿದರು.

ಅನೇಕ ಬಾರಿ ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಪ್ರಯತ್ನಗಳು ನಡೆದರು ಪೂಜ್ಯರುಗಳು ಹೊಂದಿರುವ ಶಿವ ನಿಷ್ಠೆಯ ಸಿದ್ದಾಂತಗಳು, ನೈತಿಕ ಗಟ್ಟಿತನದ ನಿಲುವುಗಳ ಪರಿಣಾಮ ಕಾರ್ಯ ಸಾಧುವಾಗಿರಲಿಲ್ಲ. ಶಿವಶಂಕರಪ್ಪನವರ ಗುರು ಭಕ್ತಿಯ ದ್ಯೋತಕವು ಸಾಕ್ಷಾತ್ಕಾರ ಎಂಬಂತೆ‌ ಭಕ್ತ ಕಂಪಿತ ನಮ್ಮ ಕೂಡಲಸಂಗಮದೇವ ಎಂಬ ವಚನ ವಾರಿಧಿಗೆ ಭಾಷ್ಯ ಬರೆದಂತೆ ಶಿವಶಂಕರಪ್ಪನವರ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಪೂಜ್ಯ ತ್ರಯರುಗಳು ಭಾಗಿಯಾಗಿ ಶಿಷ್ಯ ಪ್ರಮುಖರಾದ ಶಾಮನೂರು ಶಿವಶಂಕರಪ್ಪರವರ ಆಸೆಯಂತೆ ಒಗ್ಗೂಡಿರುವ ಈ ಚಿತ್ರಪಟವು ಕಣ್ಣಾಲಿಗಳನ್ನು ತರಿಸುತ್ತಿದೆ.

ಶಾಮನೂರು ಶಿವಶಂಕರಪ್ಪ ಶಿವೈಕ್ಯ; ದಾವಣಗೆರೆ ದೊಡ್ಡ ಶಕ್ತಿ ಅಸ್ತಂಗತ- ಸಮಾಜ ಸೇವೆಯಲ್ಲಿ ನಡೆದು ಬಂದ ಹಾದಿ ವಿವರ ಇಲ್ಲಿದೆ…

ಪೂಜ್ಯ ತ್ರಯರುಗಳು ಮಠದ ಸಂಸ್ಥಾಪನಾಚರ್ಯ ವಿಶ್ವಬಂಧು ಮರುಳಸಿದ್ದರ ಅನುಗ್ರಹ ಆಣತಿಯಂತೆ ಲಕ್ಷಾಂತರ ಅಭಿಮಾನಿ, ಹಿತೈಷಿಗಳ ಸಮಾಗಮದಲ್ಲಿ ಏಕತಾ ಮನಸ್ಸಿನಿಂದ , ಸಂಕಲ್ಪ ಪಾದೋದಕಗೈದು, ಶಿವಶಂಕರಪ್ಪನವರ ಅಂತಿಮ ವಿಧಿ ವಿಧಾನಗಳನ್ನು, ಕ್ರೀಯಾ ಸಮಾಧಿ,ಲಿಂಗೈಕ್ಯ ಸಂಸ್ಕಾರಗಳ ನೇತೃತ್ವ ವಹಿಸಿ ಚಿರಶಾಂತಿ ಕೋರಿದ್ದು, ನಿಜಕ್ಕೂ ಸಾರ್ಥಕ ಎನಿಸಿತು.

ಸದಾ ಸರ್ವರ ಅಭ್ಯುದಯಕ್ಕೆ ಬಾಳಿದ ಹಿರಿಯ ಜೀವ ಮಡಿದ ಮೇಲೂ ಸಮಾಜ ಬಾಂಧವರ ಆಸೆಯನ್ನು ಈಡೇರಿಸಿದ್ದು ನಿಜಕ್ಕೂ ಪವಾಡವೇ ಸರಿ.  ಮಠದ ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಾತಿನ ಸಂವಿಧಾನದಂತೆ ಗುರುವಿಗಂಜಿ ಶಿಷ್ಯರು , ಶಿಷರಿಗಂಜಿ ಗುರುವು’ ನಡೆಯ ಬೇಕೆನ್ನುವ ಆದರ್ಶವು ಮತ್ತೊಮ್ಮೆ ಶಾಮನೂರು ಶಿವಶಂಕರಪ್ಪನವರ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಸಾಬೀತಾಗಿದೆ.

ಶಾಮನೂರು ಶಿವಶಂಕರಪ್ಪನವರ ಆದರ್ಶ ತತ್ವಗಳ ಅಡಿಯಲ್ಲಿ ಸಮಾಜ ಮಹಾ ಬೆಳಕಿನಲ್ಲಿ ಪ್ರಜ್ವಲಿಸಲಿ.ಶ್ರೀ ತರಳಬಾಳು ಗುರು ಪರಂಪರೆಗೆ ಜಯವಾಗಲಿ……

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *