ದಾವಣಗೆರೆ; ಜಿಲ್ಲೆಯ ವಡ್ಡಿನಹಳ್ಳಿ ಬಳಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ (STPI) ಸ್ಥಾಪಿಸಲು ಉದ್ದೇಶಿಸಿ, ಕಾಯ್ದಿರಿಸಿದ ಭೂ ಮಂಜೂರಾತಿ ಆದೇಶದ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ನಿರ್ದೇಶನದಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಅಧಿಕೃತವಾಗಿ ಬೆಂಗಳೂರಿನಲ್ಲಿ ಹಸ್ತಾಂತರ ಮಾಡಿದರು.
ವಾಯುಭಾರ ಕುಸಿತ | ಎರಡ್ಮೂರು ದಿನ ಭಾರೀ ಮಳೆ ಮುನ್ಸೂಚನೆ
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್-2025ನ 2ನೇ ದಿನದಂದು ಎಸ್ಟಿಪಿಐನ ಸೆಂಟ್ರಲ್ ಡೈರೆಕ್ಟರ್ ಜನರಲ್ ಅರವಿಂದ್ ಅವರಿಗೆ ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ವಿಷನ್ ದಾವಣಗೆರೆ ತಂಡದ ಸದಸ್ಯರ ಸಮಕ್ಷಮ ಅಧಿಕೃತವಾಗಿ ಎಸ್ ಟಿಪಿಐ ಸ್ಥಾಪನೆಗಾಗಿ ಭೂ ಮಂಜೂರಾತಿ ಪತ್ರ ಹಸ್ತಾಂತರಿಸಿದರು.
ದಾವಣಗೆರೆ: ಜೆಡಿಎಸ್ ಮುಖಂಡ ಕೊಲೆಯತ್ನ ; ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ ಬಂಧನ
2 ಎಕರೆ ಜಮೀನು ಮಂಜೂರು
ಎಸ್ಟಿಪಿಐ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಸಂಜಯ್ ತ್ಯಾಗಿ ಹಾಗೂ ತಂಡದವರು ಕಳೆದ ಎರಡು ತಿಂಗಳ ಹಿಂದೆ ದಾವಣಗೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ದಾವಣಗೆರೆ ನಗರಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ವಡ್ಡಿನಹಳ್ಳಿಯಲ್ಲಿ ಕಾಯ್ದಿರಿಸಿದ 2 ಎಕರೆ ಜಮೀನನ್ನು ಎಸ್ ಟಿಪಿಐ ಸ್ಥಾಪಿಸಲು ಸೂಕ್ತವಾಗಿದೆ ಎಂಬ ಆಶಯವ್ಯಕ್ತಪಡಿಸಿದ್ದರು.
ದಾವಣಗೆರೆ: ಜಗಳವಾಡುತ್ತ ಬೈಕ್ ಚಾಲನೆ |ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ; ಯುವತಿ ಸಾವು
ಎಸ್ಡಿಪಿಐ ಪ್ರಾದೇಶಿಕ ನಿರ್ದೇಶಕ ಸಂಜಯ್ ತ್ಯಾಗಿ, ಹುಬ್ಬಳ್ಳಿ ಕ್ಲಸ್ಟರ್ ಹೆಚ್ಚುವರಿ ನಿರ್ದೇಶಕರಾದ ಶಶಿಕುಮಾರ, ವಿಷನ್ ದಾವಣಗೆರೆ ತಂಡದ ಸದಸ್ಯರಾದ ವೀರೇಶ ಪಟೇಲ್, ಡಾ. ಎನ್.ಸಿ. ಪ್ರಶಾಂತ, ಎಲ್.ಸತೀಶ ಕುಮಾರ, ಎಂ.ಟಿ.ವಿನಯ್, ಉದ್ಯಮಿ ಗಳಾದ ಇನ್ವೆಸ್ಟ್ ದಾವಣಗೆರೆಯ ನಾಗರಾಜ ರೆಡ್ಡಿ, ರಾಜೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



