ದಾವಣಗೆರೆ: ಜಿಲ್ಲೆಯ ಹರಿಹರ ನಗರದ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಮನೆಯ ಹಿಂಬಾಗಿಲು ಮುರಿದ ಕಳ್ಳರ ಗ್ಯಾಂಗ್ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.
ಹರಿಹರ ಶಿವಮೊಗ್ಗ ರಸ್ತೆಯ ತರಳಬಾಳು ಬಡಾವಣೆಯ 1ನೇ ಕ್ಲಾಸ್ನಲ್ಲಿ ಮಂಜುಳಾ ಎಂಬುವವರು ಒಬ್ಬರೇ ವಾಸವಿದ್ದರು. ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದರಿಂದ ಬೆಂಗಳೂರಿನಲ್ಲಿರುವ ಮಗ ಸಂತೋಷ್ ಕುಮಾರ್ ಆ. 25ರಂದು
ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಮುಗಿದ ನಂತರ ಸೆ. 13ರ ಬೆಳಿಗ್ಗೆ ವಾಪಸ್ ಬಂದಾಗ ಮನೆಯ ಹಿಂಬಾಗಿಲು ಓಪನ್ ಆಗಿತ್ತು.
ಮನೆಯ ಹಿಂಬದಿ ಹಾಕಿದ್ದ ಗ್ರಿಲ್ ಕಟ್ ಮಾಡಿ, ಅದಕ್ಕೆ ಹಾಕಿದ್ದ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಮಿನ ವಾರ್ಡ್ರೋಬ್ನಲ್ಲಿದ್ದ 7.9 ಲಕ್ಷ ಮೌಲ್ಯದ 98 ಗ್ರಾಂ. ಬಂಗಾರದ ಆಭರಣಗಳು ಹಾಗೂ 2 ಲಕ್ಷ ನಗದು ಸೇರಿ 9.9 ಲಕ್ಷ ಕಳ್ಳತನ ಮಾಡಿಕೊಂಡು ಹೋಗಿದದ್ದಾರೆಂದು ಸಂತೋಷಕುಮಾರ್ ಹರಿಹರ ನಗರ ಠಾಣೆಗೆ ದೂರು ನೀಡಿದ್ದಾರೆ. ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



