Connect with us

Dvgsuddi Kannada | online news portal | Kannada news online

ದಾವಣಗೆರೆ: ಜಾನುವಾರು ಕಳ್ಳತನ; 6 ಜಾನುವಾರು, 1.20 ಲಕ್ಷ ನಗದು‌-ಎರಡು ವಾಹನ ವಶ

dvg crime nyamati

ದಾವಣಗೆರೆ

ದಾವಣಗೆರೆ: ಜಾನುವಾರು ಕಳ್ಳತನ; 6 ಜಾನುವಾರು, 1.20 ಲಕ್ಷ ನಗದು‌-ಎರಡು ವಾಹನ ವಶ

ದಾವಣಗೆರೆ: ಜಾನುವಾರು ಕಳ್ಳತನ ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಪತ್ತೆ ಮಾಡಿದ್ದು, 6 ಆರೋಪಿಗಳನ್ನು ಬಂಧನ ಮಾಡಿದ್ದು, ಆರೋಪಿಗಳಿಂದ 1,20,000‌ರೂ. ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಎರಡು ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆಪಡೆಯಲಾಗಿದೆ.

ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿ.ಕಡದಕಟ್ಟೆ, ಮರಿಗೊಂಡನಹಳ್ಳಿ, ಮಾಚಿಗೊಂಡನಹಳ್ಳಿ, ಕೆಂಗಟ್ಟೆ, ದೊಡ್ಡೇರಿ, ಕಂಕನಹಳ್ಳಿ ತಾಂಡ ಗ್ರಾಮಗಳಲ್ಲಿ ಸರಣಿ ಜಾನುವಾರುಗಳ ಕಳ್ಳತನಗಳು ನಡೆದಿದ್ದು ಒಟ್ಟು 03 ಎತ್ತುಗಳು 08 ಹಸುಗಳು, 02 ಕರುಗಳು ಸೇರಿ ಒಟ್ಟು 13 ಜಾನುವಾರುಗಳು ಕಳ್ಳತವಾಗಿರತ್ತದೆ. ಈ ಸಂಬAಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 06 ಜಾನುವಾರು ಕಳ್ಳತನ ಪ್ರಕರಣಗಳು ವರದಿಯಾಗಿರುತ್ತವೆ.

ಎಸ್ಪಿ ಉಮಾ ಪ್ರಶಾಂತ್ , ಎಎಸ್ಪಿ ಪರಮೇಶ್ವರ ಹೆಗಡೆ, ಕೆ.ಎಸ್.ಪಿ.ಎಸ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಉಸ್ತುವಾರಿಯಲ್ಲಿ ಪ್ರಕರಣಗಳ ಪತ್ತೆ ಕಾರ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷ ರವಿ ಎನ್.ಎಸ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡವು ತನಿಖೆ ಕೈಗೊಂಡು ಪ್ರಕರಣಗಳ ಆರೋಪಿಗಳಾದ 1) ಮೋಹನ @ ಮನು (26) ಕೋಟೆಹಾಳ್ ವೆಂಕಟೇಶ್ವರ ನಗರ ಗ್ರಾಮ, ನ್ಯಾಮತಿ ತಾ. 2) ನಾಗರಾಜ ನಾಯ್ಕ @ ನಾಗರಾಜ (28), ಚಿ.ಕಡಕದಟ್ಟೆ ಗ್ರಾಮ ನ್ಯಾಮತಿ ತಾಲ್ಲೂಕು. 3). ಮನ್ಸೂರ್ (35), ಚೀಲೂರು ಗ್ರಾಮ, ನ್ಯಾಮತಿ ತಾಲ್ಲೂಕು. 4) ಕುಶಾಲ್ ( 25) ಆಟೋ ಚಾಲಕ, ದೊಡ್ಡೇರಿ ಗ್ರಾಮ, ನ್ಯಾಮತಿ ತಾಲ್ಲೂಕು 5) ಅಮಿತ್, (26)ದೊಡ್ಡೇರಿ ಗ್ರಾಮ, ನ್ಯಾಮತಿ ತಾಲ್ಲೂಕು 6) ಪ್ರವೀಣ್ (28) ಡ್ರೈವಿಂಗ್ ಕೆಲಸ, ಗಡೇಕಟ್ಟೆ ಗ್ರಾಮ, ನ್ಯಾಮತಿ ತಾಲ್ಲೂಕು ಇವರುಗಳನ್ನು ಬಂಧಿಸಲಾಗಿದೆ.

ಇವರನ್ನು ವಿಚಾರಣೆಗೆ ಒಳಪಡಿಸಿದಾಗ ತಾವುಗಳು 02 ತಂಡ ರಚನೆ ಮಾಡಿಕೊಂಡು ತಮ್ಮ ಅಶೋಕ ಲೈಲ್ಯಾಂಡ್ ವಾಹನಗಳಲ್ಲಿ ಹೋಗಿ ಜಾನುವಾರುಗಳನ್ನು ಕಳ್ಳತನ ಮಾಡಿ ಅವುಗಳನ್ನು ಶಿವಮೊಗ್ಗ ನಗರದ ಮುಕ್ತಿಯಾರ್ ಎಂಬಾತನಿಗೆ ಮಾರಾಟ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಸದರಿ ಮುಕ್ತಿಯಾರ್ ಈತನು ಹಾಲಿ ತಲೆ ಮರೆಸಿಕೊಂಡಿದ್ದು ಬಂಧನಕ್ಜೆ ಬಲೆ ಬೀಸಲಾಗಿದೆ.

ಆರೋಪಿಗಳು ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿ.ಕಡದಕಟ್ಟೆ, ಮರಿಗೊಂಡನಹಳ್ಳಿ, ಮಾಚಿಗೊಂಡನಹಳ್ಳಿ, ಕೆಂಗಟ್ಟೆ, ದೊಡ್ಡೇರಿ, ಕಂಕನಹಳ್ಳಿ ತಾಂಡ ಗ್ರಾಮದಲ್ಲಿನ ಒಟ್ಟು 06 ಜಾನುವಾರು ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಸದರಿ ಪ್ರಕರಣಗಳಿಗೆ ಸಂಬAಧಿಸಿದ ಒಟ್ಟು 1,20,000/- ರೂ ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ 02 ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ‌. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top