ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದೆ. ಇಂದು(ಜು.16) ಬೆಳಗ್ಗೆ ಹೊತ್ತಿಗೆ 9,122 ಕ್ಯೂಸೆಕ್ ನಷ್ಟಿದೆ. ಮುಂಗಾರು ಮಳೆ ಪ್ರಾರಂಭವಾಗಿ ಎರಡು ತಿಂಗಳಲ್ಲಿಯೇ ಭದ್ರಾ ಜಲಾಶಯ ನೀರಿನ ಮಟ್ಟ 176.9 ಅಡಿಗೆ ತಲುಪಿದೆ. ಈ ಮೂಲಕ ಭರ್ತಿಗೆ ಕೇವಲ 9.3 ಅಡಿ ಮಾತ್ರ ಬಾಕಿ ಇದೆ. ಇದು ಅಚ್ಚುಕಟ್ಟು ರೈತರಲ್ಲಿ ಸಂತಸ ತಂದಿದೆ.
ಮುಂಗಾರು ಮಳೆ ಮೇ ಕೊನೆ ವಾರದಲ್ಲಿಯೇ ಪ್ರವೇಶ ಪಡೆದರೂ ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭದ್ರಾ ಜಲಾಶಯ ಇಂದಿನ ( ಜು.16) ನೀರಿನ ಮಟ್ಟ 176.9 ಅಡಿ ಇದ್ದು, ಒಳ ಹರಿವು 9,122 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 144.7 ಅಡಿ ನೀರು ಇತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಸೂಚನೆಯಂತೆ ಸಾಕಷ್ಟು ಮಳೆ ಸುದಿದೆ. ಹೀಗಾಗಿ ಈ ವರ್ಷ ಬೇಗವೇ ಡ್ಯಾಂ ತುಂಬಿದೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :16-7-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 59,888 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 176.9 ಅಡಿ
- ಒಳ ಹರಿವು :9,122 ಕ್ಯೂಸೆಕ್
- ಹೊರ ಹರಿವು : 3,590 ಕ್ಯೂಸೆಕ್
- ಕ್ರೆಸ್ಟ್ ಗೇಟ್ : 1, 283 ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 144.7 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 27,839 ಕ್ಯೂಸೆಕ್