Connect with us

Dvgsuddi Kannada | online news portal | Kannada news online

ದಾವಣಗೆರೆ: ಜಾತಿಗಣತಿ ಒಪ್ಪಲು ಸಾಧ್ಯವಿಲ್ಲ; ಕಾಂಗ್ರೆಸ್ ಶಾಸಕರಿಂದಲೇ ವರದಿ ಬಿಡುಗಡೆಗೆ ವಿರೋಧ

MLA shivaganga basavaraju

ದಾವಣಗೆರೆ

ದಾವಣಗೆರೆ: ಜಾತಿಗಣತಿ ಒಪ್ಪಲು ಸಾಧ್ಯವಿಲ್ಲ; ಕಾಂಗ್ರೆಸ್ ಶಾಸಕರಿಂದಲೇ ವರದಿ ಬಿಡುಗಡೆಗೆ ವಿರೋಧ

ದಾವಣಗೆರೆ: ‌ಯಾವುದೇ ಕಾರಣಕ್ಕೂ ಜಾತಿಗಣತಿಯನ್ನು  ಒಪ್ಪಲು ಸಾಧ್ಯವಿಲ್ಲ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; 57 ಸಾವಿರ ಸನಿಹ; ಏ‌.14ರ ಕನಿಷ್ಠ, ಗರಿಷ್ಠ ರೇಟ್ ಎಷ್ಟಿದೆ..?

ಈ ಮೂಲಕ ಹಿಂದುಳಿದ ವರ್ಗಗಳ ಆಯೋಗದ ಶಾಶ್ವತ ಆಯೋಗ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ಜಾತಿ ಗಣತಿ ವರದಿಗೆ ಇದೀಗ ಕಾಂಗ್ರೆಸ್‌ ನಲ್ಲಿಯೇ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಜಾತಿಗಣತಿಯನ್ನು ನಾವು ಒಪ್ಪುವುದಿಲ್ಲ. ಜಾತಿಗಣತಿ ಸಾಕಷ್ಟು ಗೊಂದಲಗಳಿವೆ. ನಾವು ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಮುಂದಿನ ಮೂರ್ನಾಲ್ಕು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ

ರಾಜ್ಯದಲ್ಲಿ ಸಾದು ಲಿಂಗಾಯತರು 69 ಸಾವಿರ ಇದ್ದಾರೆ ಎಂದು ಹೇಳಿದ್ದಾರೆ, ಆದರೆ ನಮ್ಮ ಕ್ಷೇತ್ರದಲ್ಲೇ 60 ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ. ಯಾವ ಲೆಕ್ಕದಲ್ಲಿ ಜಾತಿಗಣತಿಯಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಜಾತಿ ಗಣತಿ ಬಗ್ಗೆ ಚರ್ಚೆ ಮಾಡಿದರೆ ನಾವು ಕೂಡ ಚರ್ಚೆ ಸಿದ್ಧ ಎಂದರು.

ಈ ಬಗ್ಗೆ ನಮ್ಮ ಸಮಾಜದ ಜನರು, ಗುರುಗಳ ಪ್ರಶ್ನೆ‌ಗೆ ಉತ್ತರ ಕೊಡಲು ಆಗುತ್ತಿಲ್ಲ. ಜನಗಣತಿ ವರದಿಯನ್ನು ಮಂತ್ರಿಗಳಿಗೆ ಕೊಟ್ಟಿದ್ದಾರೆ. ಏಳು ಜನ ಸಚಿವರು ಲಿಂಗಾಯತ ಶಾಸಕರ ಜೊತೆ ಅವರು ಚರ್ಚೆ ಮಾಡಬೇಕು. ಹತ್ತು ವರ್ಷಗಳ ಹಿಂದೆ ಮಾಡಿರುವ ಜಾತಿಗಣತಿಯಾಗಿದ್ದು, ಜಾತಿಗಣತಿ ಬಿಡುಗಡೆ ಮಾಡಿದರೆ ನಾವು ಜನರಿಗೆ ಉತ್ತರ ಕೊಡುವುದು ಕಷ್ಟವಿದೆ ಎಂದರು.

ಲಿಂಗಾಯತ ಸಮುದಾಯದಲ್ಲಿ ಬೇರೆ ಬೇರೆ ರೀತಿ ಬರೆಸಿದ್ದಾರೆ. ಒಂದು ಕೋಟಿ 25 ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯತರು ಇದ್ದೇವೆ. ಮೊದಲು ಜಾತಿಗಣತಿ ಬಗ್ಗೆ ಸ್ಪಷ್ಟನೆ ನೀಡಿ ಬಿಡುಗಡೆ ಮಾಡಲಿ. ಮುಸ್ಲಿಂರಲ್ಲಿ ನಾಲ್ಕೈದು ಪಂಡಗವಿದೆ, ಎಲ್ಲಾ ಮುಸ್ಲಿಂ ಎಂದು ಬರೆಸಿದ್ದಾರೆ. ಯಾವ ಜಾತಿ ಓಲೈಕೆ ಮಾಡುವುದು ಇದರಲ್ಲಿ ಏನ್ ಇಲ್ಲ. ಯಾವ ಜಾತಿ ಎಷ್ಡು ಜನ ಇದ್ದಾರೆ ಎನ್ನುವುದು ಪಾರದರ್ಶನವಾಗಿ ನೀಡಲಿ ಎಂದರು.

ಹಿರಿಯರಾದ ಶಾಮನೂರು ಶಿವಶಂಕರಪ್ಪ ನಿಲುವಿಗೆ ನಾವು ಬದ್ಧ. ಅವರ ಬೆಂಬಲಕ್ಕೆ ನಾವು ಯಾವಾಗಲು ನಿಲ್ಲುತ್ತೇವೆ. ಬಿಡುಗಡೆ ಮಾಡುವ ಬದಲು ಮೊದಲೇ ಚರ್ಚೆ ಮಾಡಬೇಕು. ಬಿಡುಗಡೆ ಮಾಡಿ ತಿದ್ದುಪಡಿ ಮಾಡಿದರೆ ಸರ್ಕಾರಕ್ಕೆ ಮುಜುಗರ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top