Connect with us

Dvgsuddi Kannada | online news portal | Kannada news online

ಬಿ-ಖಾತಾ ಪಡೆದರೂ ಅನಧಿಕೃತ ಎಂದು ನಮೂದು; ಕಟ್ಟಡ ಪರವಾನಿಗೆ, ಬ್ಯಾಂಕ್‌ ಸಾಲ ಸಿಗಲ್ಲ; ಬಿಜೆಪಿ ನಾಯಕರ ಆರೋಪ

ದಾವಣಗೆರೆ

ಬಿ-ಖಾತಾ ಪಡೆದರೂ ಅನಧಿಕೃತ ಎಂದು ನಮೂದು; ಕಟ್ಟಡ ಪರವಾನಿಗೆ, ಬ್ಯಾಂಕ್‌ ಸಾಲ ಸಿಗಲ್ಲ; ಬಿಜೆಪಿ ನಾಯಕರ ಆರೋಪ

ದಾವಣಗೆರೆ: ಅಕ್ರಮ ಕಟ್ಟಡಗಳಿಗೆ ಬಿ ಖಾತೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಕಂದಾಯ ನಿವೇಶನ, ಕಟ್ಟಡಕ್ಕೆ ಬಿ ಖಾತಾ ನೀಡುವುದಾಗಿ ಬಡವರಿಗೆ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಬಿ ಖಾತಾ ಪಡೆದರೂ ಅನಧಿಕೃತ ಎಂದು ನಮೂದು ಆಗುತ್ತಿದೆ. ಇದರಿಂದ ಕಟ್ಟಡ ಪರವಾನಿಗೆ, ಬ್ಯಾಂಕ್‌ ಸಾಲ ಸಿಗಲ್ಲತ್ತಿಲ್ಲ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ.

247 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕ: ಸಚಿವ ಪ್ರಿಯಾಂಕ್ ಖರ್ಗೆ

ಜನರನ್ನು ಮೂರ್ಖರನ್ನಾಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರಿಗೆ ಸಮಸ್ಯೆ, ಸಂಕಷ್ಟ ತಪ್ಪಿದ್ದಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ತಿಳಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 25 ಕೊನೆ ದಿನ

ಕಂದಾಯ ನಿವೇಶನಗಳನ್ನು ಬಿ ಖಾತಾ ರಿಜಿಸ್ಟರ್‌ನಲ್ಲಿ ನಮೂದಿಸಿ, ನಮೂನೆ 2ಎ ಅಥವಾ ನಮೂನೆ 3ಎ ನೀಡಲಾಗುತ್ತಿದೆ. ಆದರೆ, ಸ್ವತ್ತಿನ ವರ್ಗೀಕರಣ ಕಾಲಂನಲ್ಲಿ ಈಗಲೂ ಅನಧಿಕೃತ ಎಂದು ನಮೂದು ಮಾಡಲಾಗುತ್ತಿದೆ.‌ ಇದರಿಂದಾಗಿ ಕಂದಾಯ ನಿವೇಶನಕ್ಕಾಗಲೀ, ಕಟ್ಟಡಕ್ಕಾಗಲೀ ಕಟ್ಟಡ ಪರವಾನಿಗೆ, ಬ್ಯಾಂಕ್‌ ಸಾಲ ಸಹ ಸಿಗುವುದಿಲ್ಲ ಎಂದರು.

ರಾಜ್ಯ ಸರ್ಕಾರದ ತೆರಿಗೆ ವಸೂಲಿ ಹುನ್ನಾರ‌ ಇದರಲ್ಲಿ ಅಡಗಿದೆ. ಇದರ ಅರಿವಿಲ್ಲದ ಕಂದಾಯ ನಿವೇಶನದಾರರು, ಕಟ್ಟಡ ಮಾಲೀಕರು ತಮ್ಮ ಆಸ್ತಿಗಳನ್ನು ಬಿ ಖಾತಾ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರಿಂದ ಅನುಕೂಲವಾಗುತ್ತಿಲ್ಲ. ನಮೂನೆ-2ಎ ಮತ್ತು ನಮೂನೆ-3ಎ ನಲ್ಲಿ ಆಸ್ತಿ ವರ್ಗೀಕರಣ ಕಾಲಂನಲ್ಲಿ ಅಧಿಕೃತ ಎಂಬುದಾಗಿ ನಮೂದಿಸಬೇಕು ಎಂದು ಒತ್ತಾಯಿಸಿದರು.

ಈ ಈ ಬಗ್ಗೆ ಪರವಾನಿಗೆ ನೀಡಲು ಅಗತ್ಯ ತಿದ್ದುಪಡಿ ತರಬೇಕು. ಬ್ಯಾಂಕ್‌ಗಳಲ್ಲಿ ಮನೆ ಕಟ್ಟಲು ಸಾಲ ನೀಡಲು ನಿವೇಶನಗಳನ್ನು ಅಧಿಕೃತವೆಂದು ಆದೇಶಿಸಬೇಕು. ಇಲ್ಲವಾದರೆ ಜನರಿಗೆ ದಾರಿ ತಪ್ಪಿಸಿ, ತೆರಿಗೆ ಸಂಗ್ರಹಿಸುತ್ತಿರುವ ಬಿ ಖಾತಾ ಆಂದೋಲನವನ್ನೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯ ಆರ್.ಶಿವಾನಂದ, ಸುರೇಶ ಗಂಡಗಾಳೆ, ಜಯಪ್ರಕಾಶ, ಲಿಂಗರಾಜ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top