ದಾವಣಗೆರೆ: ರೈತರ ಜಮೀನಿನ ಮೋಟರ್ ಗಳನ್ನು ಕಳ್ಳತನ ಮಾಡುತ್ತುದ್ದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 2,55,000 ರೂ.ಬೆಲೆಯ ಮೋಟರ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆವರಗೊಳ್ಳ, ಎಲೆ ಬೇತೂರು, ಅಗಸನಕಟ್ಟೆ ಗ್ರಾಮಗಳಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಮನೆಯ ಬಳಿ ಇದ್ದ ಮೋಟರ್ ಗಳು ಕಳ್ಳತನವಾಗಿರುವ ಬಗ್ಗೆ ರೈತರು ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಮೇಲ್ಕಂಡ ಪ್ರಕರಣಗಳಲ್ಲಿ ಕಳುವಾಗಿರುವ ಮೋಟರ್ ಗಳು ಹಾಗೂ ಆರೋಪಿಗಳ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ್, ಹಾಗೂ ಮಂಜುನಾಥ ಮತ್ತು ಡಿವೈಎಸ್ಪಿ ಬಸವರಾಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇವೈ ನೇತೃತ್ವದಲ್ಲಿ ಪಿಎಸ್ಐ ಜೋವಿತ್ ರಾಜ್
ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಮೇಲ್ಕಂಡ ಪ್ರಕರಣಗಳಲ್ಲಿನ ಆರೋಪಿ ಮತ್ತು ಮಾಲು ಪತ್ತೆ ಹಚ್ಚಿ, ಕೃತ್ಯವೆಸಗಿದ ಆರೋಪಿತರಾದ 1) ಇಸ್ಮಾಯಿಲ್ ಜಬೀವುಲ್ಲಾ @ ಇಸ್ಸು (31), ಗುಜರಿ ವ್ಯಾಪಾರ, ವಾಸ:ಅಜಾದ್ ನಗರ, ದಾವಣಗೆರೆ 2) ಮಹಮ್ಮದ್ ಸಲೀಂ
@ ಮಹಮದ್ @ ಗಣೇಶ (25), ಗುಜರಿ ವ್ಯಾಪಾರ, ವಾಸುಭಟ್ಟ ಲೇ ಔಟ್ ಕ್ವಾಟ್ರಸ್, ದಾವಣಗೆರೆ, 3) ಮುಬಾರಕ್ @ ಅಂಡಿ, 27 ವರ್ಷ, ಗುಜರಿ ವ್ಯಾಪಾರ, ವಾಸುಜೋಗಲ್ ಬಾಬಾ ನಗರ, ದಾವಣಗೆರೆ, 4) ಅಮೀರ್ @ ವಾಸ್ಕೋ ಅಮೀರ್ @ ಬಾಂದ್ರಿ, 28 ವರ್ಷ, ಗುಜರಿ ವ್ಯಾಪಾರ, ವಾಸ:ಶಿವನಗರ, ದಾವಣಗೆರೆ. 5) ರಾಜಭಕ್ಷಿ, 37 ವರ್ಷ, ಗುಜರಿ ವ್ಯಾಪಾರಿ, ವಾಸ:ಅಜಾದ್ ನಗರ, ದಾವಣಗೆರೆ 6) ಇಮ್ರಾನ್ ಉಲ್ಲಾ @ ಆನಾ, 30 ವರ್ಷ,
ವಾಸಃಶಾಸ್ತ್ರಿ ಲೇ ಔಟ್, ದಾವಣಗೆರೆ. 7) ಶೇಖ್ ಹುಸೇನ್ @ ಎಂ ಸ್ಯಾಂಡ್ ಹುಸೆನ್, 30 ವರ್ಷ, ವಾಸ: ಶಿವನಗರ ದಾವಣಗೆರೆ ಇವರುಗಳನ್ನು ಪತ್ತೆ ಮಾಡಲಾಗಿದೆ.
ಆರೋಪಿತರಿಂದ 04 ಪ್ರಕರಣಗಳಲ್ಲಿ ಕಳುವಾಗಿದ್ದ ಒಟ್ಟು 2,55,000/- ರೂ ಬೆಲೆಯ 14 ಮೋಟರ್ ಮತ್ತು ಪಂಪ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 2,00,000/- ರೂ ಬೆಲೆಯ 02 ಆಟೋಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಲಾಗಿರುತ್ತದೆ.ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿತನ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಈ ಪ್ರಕರಣಗಳಲ್ಲಿ ಆರೋಪಿಗಳ ಮತ್ತು ಸ್ವತ್ತನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



