ದಾವಣಗೆರೆ: ನಗರದ ಬೇತೂರು ರಸ್ತೆಯ ಗಣೇಶ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಜನರಿಗೆ ಜಾಮೀನು ದೊರೆತಿದೆ.
ಹಿಂದೂ ಮುಖಂಡ ಸತೀಶ್ ಪೂಜಾರಿ ಸೇರಿದಂತೆ 31ಜನರಿಗೆ ಜಾಮೀನು ದೊರಕಿದೆ. ಬಿಡುಗಡೆಯಾದವರಲ್ಲಿ 14 ಹಿಂದೂ ಯುವಕರು ಹಾಗೂ 17 ಮುಸ್ಲಿಂ ಸಮುದಾಯದ ಯುವಕರಾಗಿದ್ದಾರೆ.ಉಳಿದ 8 ಇಂದು ಬಿಡುಗಡೆ ಯಾಗಲಿದ್ದಾರೆ. ಇದಕ್ಕೂ ಮುನ್ನ ನಾಲ್ಕು ಜನರಿಗೆ ಜಾಮೀನು ದೊರೆತಿತ್ತು.
ಕಳೆದ ಸೆಪ್ಟೆಂಬರ್ 19ರ ಸಂಜೆ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ತಕ್ಷಣ ಪೊಲೀಸರು ಗಲಾಟೆ ಹತೋಟಿಗೆ ತಂದು ಅನಾಹುತ ತಪ್ಪಿಸಿದ್ದರು. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಕಲ್ಲು ತೂರಾಟ ನಡೆಸಿದವರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದರು.



