ದಾವಣಗೆರೆ: ದಸರಾ ಹಬ್ಬದ ಅಂಗವಾಗಿ ವಿಶ್ವ ಹಿಂದು ಪರಿಷತ್, ಸಾರ್ವಜನಿಕ ವಿಜಯ ದಶಮಿ ಮಹೋನ್ನತ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಇಂದು (ಅ.12 ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನಗರದ ಬೇತೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾ ಯಾತ್ರೆಗೆ ವಿನೋಬ ನಗರದ ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿ ಚಾಲನೆ ನೀಡಿದರು. ಶೋಭಾಯತ್ರೆಯಲ್ಲಿ ಸಮಾಳ, ನಂದಿಕೋಲು, ವೀರಗಾಸೆ, ಡೊಳ್ಳು, ಕೋಲಾಟ, ಸಾಂಪ್ರದಾಯಿಕ ವಾದ್ಯ ಇತ್ಯಾದಿ ಕಲಾತಂಡಗಳು ಮೆರಗು ನೀಡಿದ್ದವು.
ಮಹಾತ್ಮ ಗಾಂಧಿ, ಬಸವಣ್ಣ, ವಿವೇಕಾನಂದ, ಗೋಲಾವಲ್ಕರ್, ವಾಲ್ಮೀಕಿ ಮುಂತಾದ ಮಹನೀಯರು, ದಾರ್ಶನಿಕರ ಸ್ತಬ್ದ ಚಿತ್ರಗಳಿದ್ದವು. ಹಗೇದಿಬ್ಬ ವೃತ್ತದಲ್ಲಿ ಉಗ್ರ ನರಸಿಂಹವತಾರದ ರೂಪಕ ಚಿತ್ರ ಜನರ ಗಮನ ಸೆಳೆಯಿತು. ಶೋಭಾಯಾತ್ರೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆಗೆ ಡ್ರೋಣ್ ನಿಗಾ ಹಿಡಲಾಗಿತ್ತು.
ಶೋಭಾಯಾತ್ರೆ ಹಳೆ ಬಿಡಿಒ ಆಫೀಸ್ ರಸ್ತೆ, ಚಾಮರಾಜಪೇಟೆ, ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತ, ಹಳೆ ಪಿಬಿ ರಸ್ತೆ ಮೂಲಕ ಶ್ರೀ ಬೀರಲಿಂಗೇಶ್ವರ ಮೈದಾನ ತಲುಪಿತು.ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಕೆ.ಬಿ. ಶಂಕರನಾರಾಯಣ, ಎಸ್. ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಶ್ರೀ ನಿವಾಸ್ ದಾಸಕರಿಯಪ್ಪ, ಬಿ.ಜಿ. ಅಜಯ್ ಕುಮಾರ್, ಮಲ್ಲಿಕಾರ್ಜುನ, ಹರೀಶ್ ಪವಾರ್, ಆರ್.ಎಲ್. ಶಿವಪ್ರಕಾಶ್, ಚೇತನಾ ಶಿವಕುಮಾರ್, ಎಚ್.ಬಿ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ವಿನಾಯಕ ರಾನಡೆ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ ಸೇರಿ ಸಾರ್ವಜನಿಕರು ಭಾಗವಹಿಸಿದ್ದರು.



