ದಾವಣಗೆರೆ: ಅಕ್ರಮವಾಗಿ ಮಹೀಂದ್ರಾ ಬುಲೇರೋ ವಾಹನದಲ್ಲಿ ಸಾಗಿಸುತ್ತಿದ್ದ 46 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾ.16ರಂದು ರಾತ್ರಿ ಸಮಯದಲ್ಲಿ ಹರಿಹರದಿಂದ ದಾವಣಗೆರೆ ಕಡೆಗೆ ಮಹೀಂದ್ರಾ ಬುಲೇರೋ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿರುತ್ತಿರುವ ಬಗ್ಗೆ ಪೊಲೀಸ್ ಅಧೀಕ್ಷಕರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಕೂಡಲೇ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಿ ದಾಳಿಗೆ ಸೂಚಿಸಿದ್ದು, ಅದರಂತೆ ಸದರಿ ತಂಡವು ದೊಡ್ಡಬಾತಿ ಗ್ರಾಮದ ಹತ್ತಿರ ಕೆಎ-17-ಎಎ-5831 ನೇ ಮಹೀಂದ್ರಾ ಬುಲೇರೋ ವಾಹನವನ್ನು ತಡೆದಾಗ ವಾಹನದ ಚಾಲಕ ಪೊಲೀಸರನ್ನು ನೋಡಿ ಓಡಿಹೋದಬು. ವಾಹನವನ್ನು ಪರಿಶೀಲಿಸಿ ನೋಡಿದಾಗ ವಾಹನದಲ್ಲಿ ಆಹಾರ ಇಲಾಖೆಯಿಂದ ಸರಬರಾಜು ಆಗಿರುವ ಅಕ್ಕಿ ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದಿದ್ದರಿಂದ ವಾಹನವನ್ನು ಕೃತ್ಯ ಸ್ಥಳದ ಆದಾರದ ಮೇಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಲಾಗಿದೆ.
ಪೊಲೀಸ್ ಉಪನಿರೀಕ್ಷಕರು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಆಹಾರ ನಿರೀಕ್ಷಕರು, ದಾವಣಗೆರೆ ರವರಿಗೆ ಮನವಿ ಪತ್ರ ಸಲ್ಲಿಸಿದ್ದು, ಅದರಂತೆ ಆಹಾರ ನಿರೀಕ್ಷಕ ನಾಗೇಂದ್ರ, ಜೆ ಠಾಣೆಗೆ ಬಂದು ಠಾಣಾ ಆವರಣದಲ್ಲಿದ್ದ ವಾಹನ ಪರಿಶೀಲಿಸಿದ್ದಾರೆ. ಅಕ್ಕಿ ಚೀಲಗಳ ಮೇಲೆ ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲೇಬಲ್ ಇರುವ ಸುಮಾರು 46 ಕ್ವಿಂಟಾಲ್ 30 ಕೆ ಜಿ ಪಡಿತರ ಅಕ್ಕಿ ಇದ್ದು. ಸದರಿ ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ವಿತರಣೆ ಮಾಡುವ ಅಕ್ಕಿಯ ಹೋಲಿಕೆಯಂತೆ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಕೆಎ-17-ಎಎ-5831 ನೇ ಮಹೀಂದ್ರಾ ಬುಲೇರೋ ವಾಹನದ ಚಾಲಕ ಹಾಗೂ ಮಾಲೀಕರ ಅಕ್ಕಿಯ ಸಾಗಾಟ ಮಾಡಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ- 1955 ರ ಕಾಯ್ದೆ ಅನ್ವಯ ಮುಂದಿನ ಕ್ರಮ ಕಾನೂನು ಕ್ರಮ ಕೈಗೊಳ್ಳಲು ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿರುತ್ತದೆ.
ದಾಳಿಯಲ್ಲಿ ಭಾಗವಹಿಸಿದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ್ ಸಿದ್ದನ ಗೌಡ್ರು ಹಾಗು ಡಿಸಿಆರ್ ಬಿ ಸಿಬ್ಬಂದಿಗಳಾದ ಮಜೀದ್ ಕೆ.ಸಿ, ರಮೇಶ್ ನಾಯ್ಕ್, ರಾಘವೇಂದ್ರ, ಬಾಲಾಜಿ, ಆಂಜನೇಯ ರವರುಗಳನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.



