ದಾವಣಗೆರೆ: ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾದಗಿನಿಂದ ಗೋ ಬ್ಯಾಕ್ ಸಿದ್ದೇಶ್ವರ… ಸಿದ್ದೇಶ್ವರ ಹಠಾವೋ… ದಾವಣಗೆರೆ ಬಚಾವೋ…ಘೋಷಣೆ , ಹೋರಾಟ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರುಗೆ ಕೇಳಿದ್ದಕ್ಕೆ ನಾನು ಈ ಇದರ ಬಗ್ಗೆ ಮಾತನಾಡಲಿಕ್ಕೆ ಆಗುವುದಿಲ್ಲ. ವಿರೋಧ ಎಲ್ಲಿಲ್ಲ ಹೇಳಿ? ದೇಶದಲ್ಲಿ ಎಲ್ಲ ಕಡೆ ವಿರೋಧ ಸಾಮಾನ್ಯ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ರೆಬಲ್ ನಾಯಕರಿಗೆ ಟಾಂಗ್ ಕೊಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿ,ಪಕ್ಷದ ಹಿರಿಯರು, ಮುಖಂಡರು ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಮನೆಯೇ ನನ್ನ ಕುಟುಂಬವಾಗಿತ್ತು. ಈಗ ನನಗೆ ಇಡೀ ದಾವಣಗೆರೆ ಕುಟುಂಬವಾಗಿದೆ. ಕ್ಷೇತ್ರದ ಜನರ ಎಲ್ಲ ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದಿಂದ ಗೆದ್ದು, ತಾವರೆ ಹೂವು ಮುಡಿದು ಸಂಸತ್ಗೆ ಪ್ರವೇಶಿಸುತ್ತೇನೆ. 28 ವರ್ಷದಿಂದಲೂ ಕಾರ್ಯಕರ್ತರನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಮಾವನವರು ಏಳು ವರ್ಷ, ಪತಿ ಸಿದ್ದೇಶ್ವರ್ 20 ವರ್ಷ ಸೇವೆ ಮಾಡಿದ್ದಾರೆ. ಚುನಾವಣ ಪ್ರಚಾರದ ಸಂದರ್ಭದಲ್ಲಿ ಎಲ್ಲ ಮನೆ ಗಳಿಗೆ ಹೋಗಿದ್ದೇನೆ. ಕಾರ್ಯಕರ್ತರ ಸಂಪರ್ಕವಿದೆ. ಹೀಗಾಗಿ ನನಗೆ ರಾಜಕಾರಣ ಹೊಸದೇನು ಅಲ್ಲ ಎಂದರು.
ಟಿವಿಯಲ್ಲಿ ನನ್ನ ಹೆಸರು ನೋಡಿ ಖುಷಿಯಾಯಿತು. ನನಗೆ ಟಿಕೆಟ್ ಸಿಗುವ ನಿರೀಕ್ಷೆ ಎ ಇರಲಿಲ್ಲ. ವರಿಷ್ಠರು ನನಗೆ ಅವಕಾಶ ನೀಡಿದ್ದಾರೆ. ಕಳಂಕ ಬಾರದಂತೆ ಎಲ್ಲರ ಸಹಕಾರದಿಂದ ಗೆಲ್ಲುತ್ತೇನೆ. ಸಿದ್ದೇಶ್ವರ ಅವರು ಕ್ಷೇತ್ರದ ಜನರೊಂದಿಗೆ ಇದ್ದೇ ಇರುತ್ತಾರೆ. ಅವರ ಸಲಹೆ, ಸಹಕಾರ ಪಡೆದು ಕೆಲಸ ಮಾಡುತ್ತೇನೆ. ಮನೆ ವ್ಯವಹಾರ, ತೋಟ ನೋಡುವುದು ನನ್ನ ಕೆಲಸವಾಗಿತ್ತು. ಸಣ್ಣ ಕುಟುಂಬದಿಂದ ಈಗ ದೊಡ್ಡ ಕುಟುಂಬಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ದೇಶ ಸೇವೆಗೆ ಬರುತ್ತಿದ್ದೇನೆ ಎಂದು ತಿಳಿಸಿದರು.



