ದಾವಣಗೆರೆ: ತೀವ್ರ ಬರದ ಹೊತ್ತಲ್ಲಿ ಗುಮ್ಮನೂರಲ್ಲಿ ಒಮ್ಮೆಲೇ ಗಗನಕ್ಕೆ ಚಿಮ್ಮಿದ ಗಂಗಾದೇವಿ; 589 ಅಡಿಗೆ ಬರೋಬ್ಬರಿ 6 ಇಂಚು ನೀರು…!!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಇಡೀ ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದೆ. ಹನಿ, ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಬರದ ಹೊತ್ತಿನಲ್ಲಿಯೇ ಗಂಗಾದೇವಿ ಗಗನಕ್ಕೆ ಚಿಮ್ಮಿದ್ದಾಳೆ. ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ಗ್ರಾ.ಪಂ. ವತಿಯಿಂದ ಕುಡಿಯುವ ನೀರಿಗೆ ಕೊರೆಸಿದ ಬೋರ್ವೆಲ್ ನಲ್ಲಿ ಒಮ್ಮೆಲೇ ‌ನೀರು ಆಕಾಶಕ್ಕೆ ಚಿಮ್ಮಿದೆ.

ಕುಡಿಯುವ ನೀರಿನ‌ ತೀವ್ರ ಸಮಸ್ಯೆ ಹಿನ್ನೆಲೆಯಲ್ಲಿ ಗುಮ್ಮನೂರು ಗ್ರಾಮ ಪಂಚಾಯಿತಿ ಬೊರ್​ವೆಲ್ ಕೊರೆಸಲು ತೀರ್ಮಾನಿಸಿತ್ತು. ಆಗ, 589 ಅಡಿಗೆ 6 ಇಂಚು ನೀರು ಉಕ್ಕಿದೆ. ಒಮ್ಮೆಲೇ ನೀರು ಕಂಡ ಊರಿನ ಜನ ಹರ್ಷಗೊಂಡಿದ್ದಾರೆ. ಸಮರ್ಪಕ ಮಳೆ ಕೊರತೆಯಿಂದ ಅಂತರ್ಜಲ‌ ಮಟ್ಟ ಕುಸಿದಿದ್ದು, ನೀರಿನ ಮೂಲಗಳು ಬರಿದಾಗುತ್ತಿವೆ. ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಎಷ್ಟೇ ಬೋರ್ವೆಲ್​​ಗಳಲ್ಲಿ ನೀರು ಬೀಳುತ್ತಿಲ್ಲ.

ಈ ಪ್ರದೇಶದಲ್ಲಿ ಒಂದು ಸಾವಿರ ಅಡಿ ಬೋರ್ವೆಲ್ ಕೊರೆಸಿದರೂ ನೀರು ಸಿಗುವುದಿಲ್ಲ. ಹೀಗಾಗಿ ಈ ಬೋರ್ವೆಲ್ ನಲ್ಲಿ ಉಕ್ಕಿದ ನೀರು ಕಂಡು ಜನರಿಗೆ ಒಂದೆಡೆ ಅಚ್ಚರಿಯಾದ್ರೆ, ಮತ್ತೊಂದೆಡೆ ಸಂತಸ ತಂದಿದೆ. 589 ಅಡಿಗೆ ನೀರು ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಖುಷಿಗೆ ಕಾರಣವಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *