ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ‘ಕರ್ನಾಟಕ ಭಾರತ್ ಗೌರವ್ ಯಾತ್ರೆ’ಯು ಜನವರಿ 18ರಿಂದ ಆರಂಭವಾಗಲಿದೆ. 6 ದಿನಗಳ ಯಾತ್ರೆಯಲ್ಲಿ ರಾಮೇಶ್ವರ, ಮದುರೈ, ಕನ್ಯಾಕುಮಾರಿ, ತಿರುವನಂತಪುರ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಯಾತ್ರಿಗೆ ಒಟ್ಟು 15 ಸಾವಿರ ರೂ. ಖರ್ಚಗಲಿದ್ದು, ರಾಜ್ಯ ಸರ್ಕಾರವು 5 ಸಾವಿರ ರೂ. ಸಹಾಯಧನ ನೀಡಲಿದೆ. ಉಳಿದ 10 ಸಾವಿರ ರೂ. ಯಾತ್ರಿಯೇ ಭರಿಸಬೇಕಿದೆ. ದಾವಣಗೆರೆಯಲ್ಲಿಯೂ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಐಆರ್ಸಿಟಿಸಿ/ ಐಟಿಎಂಎಸ್ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಈ ವಿಶೇಷ ಮೊದಲು ಹಂತದಲ್ಲಿ ರೈಲು ಜ. 18 ರಿಂದ ಹೊರಟು ಜ.23 ರಂದು ಆಗಮಿಸಲಿದೆ. ಎರಡನೇ ಹಂತದಲ್ಲಿ ಜ.30 ರಿಂದ ಹೊರಟು ಫೆ.4ಕ್ಕೆ ಆಗಮಿಸಲಿದೆ. ರಾಮೇಶ್ವರ- ರಾಮೇಶ್ವರ ದೇವಾಲಯ. ಕನ್ಯಾಕುಮಾರಿ- ಶ್ರೀ ಭಗವತಿ ದೇವಾಲಯ. ಮಧುರೈ- ಶ್ರೀ ಮೀನಾಕ್ಷಿ ದೇವಾಲಯ. ತಿರುವನಂತಪುರಂ- ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಈ ಪ್ಯಾಕೇಜ್ ನಲ್ಲಿ ನೀಡಲಾಗುತ್ತದೆ.
ರೈಲು ಹತ್ತುವ ಮತ್ತು ಇಳಿಯುವ ನಿಲ್ದಾಣಗಳು: ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ಆಗಿವೆ. ಯಾತ್ರೆಯ ಒಟ್ಟು ಪ್ಯಾಕ್ 15,000 ರೂ.ಗಳು. ಕರ್ನಾಟಕ ಸರ್ಕಾರದಿಂದ ಸಹಾಯಧನ 5000 ರೂ.ಗಳು. ಯಾತ್ರಿಯ ಪಾವತಿಸಬೇಕಾದ ಮೊತ್ತ ಕೇವಲ 10,000 ರೂ.ಗಳು ಆಗಿವೆ. ಮುಂಗಡ ಟಿಕೆಟ್ ಕಾಯ್ದಿರುಸಲು 8595931291, 8595931292, 8595931294 ಸಂಪರ್ಕಿಸಿ.



