ದಾವಣಗೆರೆ: ಪೋಕ್ಸೊ ಕೇಸ್ ದಾಖಲಿಸುವುದಾಗಿ ಆರೋಪಿಯನ್ನು ಹೆದರಿಸಿ 37 ಸಾವಿರ ಲಂಚ ಪಡೆದ ಕಾನ್ ಸ್ಟೇಬಲ್ ಅಮಾನತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಆದೇಶ ಮಾಡಿದ್ದಾರೆ.
ಆರೋಪಿಯಿಂದ ಹರಿಹರ ನಗರ ಠಾಣೆಯ ಕಾನ್ಸ್ಟೆಬಲ್ ಮಂಜುನಾಥ್ ಬಿ.ವಿ. ಪೋಕ್ಸೊ ಕೇಸ್ ಹಾಕುತ್ತೇನೆ ಎಂದು ನಿಂದಿಸಿ ಠಾಣೆಯಲ್ಲಿಯೇ 12,000 ಪಡೆದಿದ್ದರು. ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಆರೋಪಿಯ ಬಳಿ ಇದ್ದ ಮೊಬೈಲ್ ಕಸಿದುಕೊಂಡು ಪೋನ್ ಪೇಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತೋರಿಸು ಎಂಉ, ಆರೋಪಿಯ ಖಾತೆಯಲ್ಲಿ 25 ಸಾವಿರ ಖಾತೆಗೆ ಹಾಕಿಕೊಂಡಿದ್ದಾರೆ ಆರೋಪಿಯ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ನಗರ ಇನ್ಸ್ ಪೆಕ್ಟರ್ ದೇವಾನಂದ್ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅಮಾನತು ಮಾಡಿದ್ದಾರೆ.



