ದಾವಣಗೆರೆ: ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ.29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಮ್.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಶಾಮನೂರ್ ರಸ್ತೆ, ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಲಕ್ಷ್ಮೀ ಪ್ಲೋರ್ ಮಿಲ್, ಜಿ.ಹೆಚ್ ಪಾರ್ಕ, ಸಿದ್ದವೀರಪ್ಪ ಬಡಾವಣೆ, ಬಿ.ಐ.ಇ.ಟಿರಸ್ತೆ, ಎಸ್.ಎನ್. ಲೇಔಟ್,ಗ್ಲಾಸ್ಹೌಸ್ ಏರಿಯಾ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಎಸ್.ಎಸ್. ಹೈಟೆಕ್ ಫೀಡರ್ ವ್ಯಾಪ್ತಿಯ ಎಸ್.ಓ.ಜಿ ಕಾಲೋನಿ ಎ, ಬಿ & ಸಿ ಬ್ಲಾಕ್, ಬುದ್ದ, ಬಸವ ಭೀಮ ನಗರ ,ಕರ್ನಾಟಕ ಬೀಜ ನಿಗಮ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



