ದಾವಣಗೆರೆ: ನಮ್ಮ ಸರ್ಕಾರದ ಅವಧಿಯಲ್ಲಿ ಕಡಿಮೆ ದರಕ್ಕೆ ಮರಳ ಸಿಗುತಿತ್ತು. ಈಗ ಹತ್ತು ಸಾವಿರ ಕೊಟ್ಟರೂ ಒಂದು ಲೋಡ್ ಮರಳು ಸಿಗುತ್ತಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಮರಳಿನ ದಂಧೆ ಆರಂಭವಾಗಿದೆ. ಎಲ್ಲರಿಗೂ ಕಡಿಮೆ ದರಕ್ಕೆ ಮರಳ ಸಿಗಬೇಕು. ಮುಕ್ತವಾಗಿ ಕಡಿಮೆ ದರಕ್ಕೆ ಮರಳು ಸಿಗಬೇಕು. ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಎಸಿ ಅವರಿಗೂ ಹೇಳಿದ್ದೇನೆ. ಕಡಿಮೆ ದರ ನಿಗದಿಪಡಿಸುವಂತೆ ಹೇಳಿದ್ದೇನೆ. ವಿನಾಃ ಕಾರಣನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಸೀಜ್ ಆದ ಮರಳು ಹೊಸದುರ್ಗಕ್ಕೆ ಕಳುಹಿಸಲಾಗುತ್ತಿದೆ. ಕಡಿಮೆ ದರಕ್ಕೆ ಮರಳು ಸಿಗದಿದ್ದರೆ ಹೋರಾಟ ನಡೆಸುತ್ತೇನೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ಹೊನ್ನಾಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಮಟ್ಕಾ, ಇಸ್ಪೀಟ್ ಅಡ್ಡೆಗಳು ,ಮಾಂಗಲ್ಯ ಸರಗಳ್ಳತನ ಹೆಚ್ಚಾಗಿವೆ. ಆದಷ್ಟು ಬೇಗ ಎಸ್ಪಿ ಉಮಾ ಪ್ರಶಾಂತ್ ಅವರು ಕಡಿವಾಣ ಹಾಕಬೇಕು. ಇಲ್ಲದಿದ್ದರೆ, ಎಸ್ಪಿ ಗಿಸ್ಪಿಗೆ ಕಂಪ್ಲೆಂಟ್ ಕೊಡಲ್ಲ. ನೇರ ಡಿಜಿಗೆ ಹೋಗಿ ಕಂಪ್ಲೆಂಟ್ ಕೊಡ್ತೇನೆ.ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಬೇಕು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ವಾ. ಓಸಿ, ಇಸ್ಪೀಟ್ ಇದೇ ರೀತಿಯಲ್ಲಿ ಮುಂದುವರಿದರೆ ಡಿಜಿಗೆ ಹೋಗಿ ಕಂಪ್ಲೆಂಟ್ ಕೊಡ್ತೇನೆ ಎಂದು ತಿಳಿಸಿದರು.



