ದಾವಣಗೆರೆ: ಇಸ್ಫೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, 95 ಸಾವಿರ ನಗದು ವಶಕ್ಕೆ ಪಡೆಯಲಾಗುದೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಣಪುರ ಗ್ರಾಮದ ಕೆರೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 04 ಜನರನ್ನು ಹಿಡಿದು ಒಟ್ಟು 95,000/- ನಗದು ಹಣ ಹಾಗೂ ಅರೋಪಿತರಿಂದ 01 ಬೈಕ್ , 04 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ DCRB ಘಟಕದ Dysp ಬಿ.ನಾಗಪ್ಪ ಹಾಗೂ ಸಿಬ್ಬಂದಿಗಳಾದ ಮಾರುತಿ, ರಾಘವೇಂದ್ರ, ಮಜೀದ್, ನಟರಾಜ್, ಆಂಜನೇಯ, ಬಾಲಾಜಿ, ಅಶೋಕ, ರಮೇಶ್ ನಾಯ್ಕ, ಸುರೇಶ್, ನಿಂಗಪ್ಪ ರವರನ್ನು ಒಳಗೊಂಡ ತಂಡ ದಾಳಿ ಮಾಡಿತ್ತು.



