Connect with us

Dvgsuddi Kannada | online news portal | Kannada news online

ಮಣ್ಣಿನ ಮಕ್ಕಳ ಸಂಭ್ರಮ, ಸಡಗರದ ಭೂಮಿ ಹುಣ್ಣಿಮೆ….

IMG 20231028 195449

ಪ್ರಮುಖ ಸುದ್ದಿ

ಮಣ್ಣಿನ ಮಕ್ಕಳ ಸಂಭ್ರಮ, ಸಡಗರದ ಭೂಮಿ ಹುಣ್ಣಿಮೆ….

ಅನ್ನದಾತ ರೈತನಿಗೆ ಸಂಭ್ರಮದ ದಿನ. ಅನ್ನದಾತರ ಜೀವನಾಡಿ ಭೂ ತಾಯಿಗೆ ವಿಶೇಷ ಸಿಂಗಾರಗೊಳಿಸಿ ಪೂಜೆ ಸಲ್ಲಿಸುವ ಭೂಮಿ ಹುಣ್ಣಿಮೆ ನೋಡದೇ ಒಂದು ಚಂದ. ಜಮೀನಿನಲ್ಲಿ ಮೈ ತುಂಬಿದ ಬೆಳೆದ ಬೆಳೆಗೆ ಹಾಗೂ ಭೂ ತಾಯಿಗೆ ಮನೆಯವರೆಲ್ಲ ಸೇರಿ ಪೂಜೆ ಸಲ್ಲಿಸುವುದೇ ಭೂಮಿ ಹುಣ್ಣಿಮೆ ವಿಶೇಷ. ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಂಭ್ರಮ, ಸಡಗರದಿಂದ ಆಚರಿಸಿದರು.

ಇದೊಂದು ವಿಶಿಷ್ಟ ಸಂಪ್ರದಾಯದ ಹಬ್ಬವಾಗಿದ್ದು, ಭೂಮಿ ತಾಯಿಯೇ ರೈತಾಪಿ ಜನಗಳ ಜೀವನಾಡಿಯಾಗಿದೆ. ಭೂಮಿ ಹುಣ್ಣಿಮೆ ದಿನ‌ ಮೈ ತುಂಬಿ ಬೆಳೆದ ಭೂತಾಯಿಗೆ ಸೀಮಂತ ಮಾಡುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದ ಭತ್ತ, ಅಡಿಕೆ, ಅಡಿಕೆ, ತುಂಗು,ಬಾಳೆ ಹೀಗೆ ಯಾವ ಬೇಳೆ ಇರುತ್ತೋ ಆ ವೆಳೆಗೆ ಸೀರೆ ಉಡಿಸಿ ಉಡಿ ತುಂಬುವುದು ವಾಡಿಕೆಯಾಗಿದೆ. ಜೊತೆಗೆ ಭೂ ತಾಯಿಗೆ ವಿಶೇಷವಾಗಿ ತಯಾರಿಸಿದ ಸಹಿ ಅಡುಗೆ,ಬುತ್ತಿ, ಚಿತ್ರಾನ್ನ, ಕಡುಬು, ಕಜ್ಜಾಯ ಎಡೆ ಮಾಡಿ ಅರ್ಪಿಸಿ ಸಂಭ್ರಮಿಸುತ್ತಾರೆ.

ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ರೈತರು ಭೂಮಿ ಹುಣ್ಣಿಮೆ ಆಚರಿಸುತ್ತಾರೆ. ಬುಟ್ಟಿ ತಯಾರಿಸಿ ಅದಕ್ಕೆ ಕೆಮ್ಮಣ್ಣು ಮತ್ತು ಶೇಡಿಯ ಚಿತ್ತಾರ ಬಿಡಿಸಿ ಬುಟ್ಟಿಯಲ್ಲಿ ಪೂಜಾ ಸಾಮಗ್ರಿ ತುಂಬಿಕೊಂಡು ತಮ್ಮ ಹೊಲಗಳಿಗೆ ಹೋಗಿ ವಿಶೇಷವಾಗಿ ಪೂಜೆ ಮಾಡುತ್ತಾರೆ. ನಂತರ ಚರಗವನ್ನು ತಮ್ಮ ಹೊಲದ ಸುತ್ತ ಬೀರುತ್ತಾರೆ.

ಮನೆಯವರೆಲ್ಲರೂ ಸಂತಸ ಸಂಭ್ರಮಗಳಿಂದ ಒಟ್ಟಾಗಿ ತೋಟದಲ್ಲೆ ಊಟ ಮಾಡುವ ದೃಶ್ಯ ಕೂಡ ಸುಂದರವಾಗಿರುತ್ತದೆ. ಒಟ್ಟಾರೆ ಭೂಮಿಯನ್ನೆ ನಂಬಿರುವ ನಮ್ಮ ರೈತರು ಇದನ್ನು ಆರಾಧನೆಯಂತೆ ಮಾಡುತ್ತಾರೆ. ನೀರಾವರಿ ಪ್ರದೇಶದಲ್ಲಿ ಈ ಸಂಭ್ರಮ ಜೋರು ಇರುತ್ತೆ. ಆದರೆ, ಬಯಲುಸೀಮೆಯಲ್ಲಿ ತಕ್ಕ‌ಮಟ್ಟಿಗೆ ಈ ಹಬ್ಬ ಆಚರಿಸುತ್ತಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top