ದಾವಣಗೆರೆ: ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಪುರಾಣ ಪ್ರವಚನದ ಕಾರ್ಯಕ್ರಮ ಅ. 15ರಿಂದ 24 ರವರೆಗೆ ಆಯೋಜಿಸಲಾಗಿದೆ. ಅ. 15ರಂದು ಬೆಳಗ್ಗೆ 6.30 ರಿಂದ ದೀಪಾರಾಧನೆ, ಬ್ರಾಹ್ಮಿ ಮುಹೂರ್ತದಲ್ಲಿ ವಿಶ್ಲೇಶ್ವರ ಘಟ ಸ್ಥಾಪನೆ, ನವರಾತ್ರಿ ನವದುರ್ಗೆ ಪೂಜಾ ಕಾರ್ಯಗಳು ಜರುಗಲಿವೆ.
ಅಂದಿನಿಂದ 22 ರವರೆಗೆ ದೇವಿಗೆ ವಿಶೇಷ ಅಲಂಕಾರಮಾಡಿ ಪೂಜೆ ಸಲ್ಲಿಸಲಾಗುವುದು, ಅ.23 ರಂದು ಬೆಳಿಗ್ಗೆ 10.30 ರಿಂದ ದೇವಿಗೆ ಸಿಂಹ ವಾಹನ ಅಲಂಕಾರ ಹಾಗೂ ಆಯುಧ ಪೂಜೆ, ಕುಂಬಾಭಿಷೇಕವಿದ್ದು, ಅ. 24 ರಂದು ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಿ ಅಂದು ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅ. 25ರಂದು
ಕಳಸದ ಪೂಜೆ ಹಾಗೂ ಬೆಳಗ್ಗೆ 11.30 ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಮನೂರು ಶಿವಶಂಕರಪ್ಪ ಪತ್ನಿ ದಿ.ಪಾರ್ವತಮ್ಮ ಜ್ಞಾಪಕವಾಗಿ ಈ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ ಜರುಗಲಿದ್ದು, ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳಬೇಕಾದ ವಧು-ವರರು ಅ. 20ರ ಒಳಗಾಗಿ ದೇವಸ್ಥಾನದ ಧರ್ಮದರ್ಶಿಯ ಸಂಪರ್ಕಿಸಬಹುದು ಎಂದು ಟ್ರಸ್ಟ್ ತಿಳಿಸಿದೆ.



