Connect with us

Dvgsuddi Kannada | online news portal | Kannada news online

ದಾವಣಗೆರೆ: ಆನೆಕೊಂಡ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸಂಭ್ರದ ಕಾರ್ಣಿಕ; ಶಾಮನೂರು ಶಿವಶಂಕರಪ್ಪ ವಿಶೇಷ ಪೂಜೆ; ಈ ಬಾರಿಯ ಕಾರ್ಣಿಕದಲ್ಲಿ ಕೊಟ್ಟ ಎಚ್ಚರಿಕೆ ಏನು..?

IMG 20230911 220441 1

ದಾವಣಗೆರೆ

ದಾವಣಗೆರೆ: ಆನೆಕೊಂಡ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸಂಭ್ರದ ಕಾರ್ಣಿಕ; ಶಾಮನೂರು ಶಿವಶಂಕರಪ್ಪ ವಿಶೇಷ ಪೂಜೆ; ಈ ಬಾರಿಯ ಕಾರ್ಣಿಕದಲ್ಲಿ ಕೊಟ್ಟ ಎಚ್ಚರಿಕೆ ಏನು..?

ದಾವಣಗೆರೆ: ರಾಮ ರಾಮ ಎಂದು ನುಡಿಧೀತ್ತಲೆ ಮುತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ ನರಲೋಕದ ಜನಕೆ ಆನೆ ಕಿರೀಟ ಇಟ್ಟಿತಲೆ ಮಹಾತಾಯಿ ಬೇರುಸೊಪ್ಪು ಬೇಸಿತ್ತಲೆ ಎಚ್ಚರ…! ಇದು ಐತಿಹಾಸಿಕ ಪ್ರಸಿದ್ಧ ಶ್ರೀ ಕ್ಷೇತ್ರ ಆನೆಕೊಂಡ ಗ್ರಾಮದ ಬಸವೇಶ್ವರ ಜಾತ್ರೆಯ ಈ ಬಾರಿಯ ಕಾರ್ಣಿಕ.

ಶ್ರಾವಣಮಾಸದ ಕಡೇ ಸೋಮವಾರದ ಪ್ರಯುಕ್ತ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಣಿಕ ಮತ್ತು ಜಾತ್ರಾ‌ ಮಹೋತ್ಸವಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು. ಇದೇ ವೇಳೆ ಲೋಕ ಕಲ್ಯಾಣಕೆ ವಿಶೇಷ ಪೂಜೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ದೇವರಿಗೆ ಪೂಜೆ ಸಲ್ಲಿಸಿ ಜಾತ್ರೆ ಮಹೋತ್ಸವ ಕಣ್ತುಂಬಿಕೊಂಡರು. ಬೆಳಗ್ಗೆಯಿಂದಲೇ ಭಕ್ತರು ಹರಿದು ಬರುತ್ತಿದ್ದು, ಸಂಜೆ ಕಾರ್ಷಿಕ ವೇಳೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಜಾತ್ರೆಯು ಅದ್ಧೂರಿಯಾಗಿ ಸಂಭ್ರಮದಿಂದ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಸದಸ್ಯರು, ಗೌಡ್ರು ಅಜ್ಜಪ್ಪ, ಆನೆಕೊಂಡ ನಾಗರಾಜ್, ಕುಮಾರ್,ಮಂಜುನಾಥ್, ಗೌಡ್ರು ಸುರೇಶ್, ಅಪಾರ ಸಂಖ್ಯೆ ಭಕ್ತದಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top