ದಾವಣಗೆರೆ; ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಶ್ರೀಗಂಧ ಮರ ಕಳ್ಳತನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 6.50 ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ಉಪವಿಭಾಗ ಠಾಣಾ ಸರಹದ್ದಿನಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಪ್ರಕರಣ ಪತ್ತೆಗೆ ತಂಡ ರಚಿಸಲಾಗಿತ್ತು. ಬಂಧಿತ ಆರೋಪಿಗಳನ್ಮು ಇಸ್ಮಾಯಿಲ್ (40) ಮರಕೋಯ್ಯುವ ಕೆಲಸ, ವಾಸ ಗಾಳಿಹಳ್ಳಿ ಗ್ರಾಮ, ಚನ್ನಗಿರಿ ತಾಲ್ಲೂಕ್, ಜಬೀವುಲ್ಲಾ (45) ವರ್ಷ ಮರಕೋಯ್ಯುವ ಕೆಲಸ ವಾಸ ದಡಂಗಟ್ಟೆ ಗ್ರಾಮ ಭದ್ರಾವತಿ, ಹೈದರ್ ಖಾನ್ (30) ಬೈಕ್ ಮ್ಯಾಕಾನಿಕ್ ಕೆಲಸ, ಸೂಳೆಬೈಲು ಶಿವಮೊಗ್ಗ ಟೌನ್ ಸೇರಿದವರು ಎಂದು ಗುರುತಿಸಲಾಗಿದೆ.
ಆರೋಪಿಗಳಯ ಚನ್ನಗಿರಿ ಪೊಲೀಸ್ ಠಾಣೆಯ 3 ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣೆಯ 2 ಪ್ರಕರಣಗಳು, ಬಸವಾಪಟ್ಟಣ ಠಾಣೆಯ 1 ಪ್ರಕರಣ ಮತ್ತು ಸಂತೇಬೆನ್ನೂರು ಠಾಣೆಯ 1 ಪ್ರಕರಣ ಒಟ್ಟು 7 ಶ್ರೀಗಂಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಆರೋಪಿತರಿಂದ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 6,50,000 ರೂ. ಬೆಳೆಬಾಳುವ 61 ಕೆ.ಜಿ ಶ್ರೀಗಂಧದ ಮರದ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್, 2 ಕೈ ಗರಗಸ, 1ಮಚ್ಚು, 1 ಕೊಡಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಿ ಬಸರಗಿ, ಪೊಲೀಸ್ ಉಪಾಧೀಕ್ಷಕ ಡಾ. ಸಂತೋಷ ಕೆ.ಎಂ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಸಿಪಿಐ ಸಂತೇಬೆನ್ನೂರು ವೃತ್ತ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿ.ಎಸ್.ಐ ಸಂತೇಬೆನ್ನೂರು ರೂಪಾ ತೆಂಬದ್ ಹಾಗೂ ಸಿಬ್ಬಂದಿಗಳಾದ ಸತೀಶ, ರುದ್ರೇಶ ಎಂ. ಉಮೇಶ ರೆಡ್ಡಿ, ಆಂಜನೇಯ, ಶ್ರೀ ರಾಘವೇಂದ್ರ, ಪ್ರವೀಣಗೌಡ, ನಾಗಭೂಷಣ, ಬಸವಾಪಟ್ಟಣ ಠಾಣೆಯ ಹಿಬ್ರಾಹಿಂ ಮನ್ನಖಾನ್, ಪ್ರಕಾಶ ಚನ್ನಗಿರಿ ಪೊಲೀಸ್ ಠಾಣೆಯ ಬೀರೇಶ್ ಪುಟ್ಟಕ್ಕನವರ , ರಘು, ಲೋಕೇಶ ಒಳಗೊಂಡ ತಂಡ ರಚಿಸಲಾಗಿತ್ತು.
ಶ್ರೀಗಂಧ ಮರಗಳ್ಳತನ ಪ್ರಕರಣಗಳಲ್ಲಿನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



