ದಾವಣಗೆರೆ: ಜಿಲ್ಲೆಯ ಸಾರ್ವಜನಿಕರು ದೂರು ನೀಡಲು ಹಾಗೂ ಪೊಲೀಸ್ ಸೇವೆಗಾಗಿ ಪೊಲೀಸ್ ಠಾಣೆಗಳಿಗೆ ಬೇಟಿ ನೀಡಿದಾಗ ಮೊಬೈಲ್ ಮೂಲಕ ಠಾಣೆಯಲ್ಲಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ನಿಮ್ಮ ಪ್ರತಿಕ್ರಿಯೆ ಮತ್ತು ಸಲಹೆ ನೀಡಬಹುದು. ಇದಕ್ಕಾಗಿ ಪೊಲೀಸ್ ಇಲಾಖೆ ಜನಸ್ನೇಹಿ ಲೋಕಸ್ಪಂದನ ಜಾರಿ ಮಾಡಿದೆ.
ಈ ಮೊದಲು ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ಹಾಗೂ ಅಹವಾಲು ನೀಡಲು ಬಂದಾಗ ಜನಸ್ನೇಹಿ ವ್ಯವಸ್ಥೆಯ ‘ವಿಜಿಟರ್ ರಿಜಿಸ್ಟರ್’ ತಂತ್ರಾಂಶದಲ್ಲಿ ಮಾಹಿತಿ
ಪಡೆಯಲಾಗುತ್ತಿದ್ದು, ಈ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ (QR Code) ಮೂಲಕ ಸಾರ್ವಜನಿಕರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸ್ವೀಕರಿಸಲು ‘ಲೋಕ ಸ್ಪಂದನ’ ಉಪಕ್ರಮ ಜಾರಿಗೆ ತರಲಾಗಿದೆ.
ಲೋಕಸ್ಪಂದನ ಜಾರಿಯಾಗಿರುವುದರಿಂದ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಲು ಹಾಗೂ ವಿವಿಧ ಪೊಲೀಸ್ ಸೇವೆಗಾಗಿ ಬರುವವರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳು ಸಂಗ್ರಹವಾಗುವುದರಿಂದ ಸಾರ್ವಜನಿಕರ ದೂರು ಹಾಗೂ ಅಹವಾಲುಗಳನ್ನು ಉತ್ತಮ ಸೇವೆ
ಹಾಗೂ ನ್ಯಾಯ ದೊರಕುವುದರ ಜೊತೆಗೆ ಪೊಲೀಸ್ ಸೇವೆಯಲ್ಲಿನ ಗುಣಮಟ್ಟ ಹೆಚ್ಚಿಸಲು ಅನೂಕೂಲವಾಗುತ್ತದೆ. ಒಟ್ಟಾರೆಯಾಗಿ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕ ಹಾಗೂ ನ್ಯಾಯಬದ್ಧ ಸೇವೆಯಿಂದಸಾರ್ವಜನಿಕ ವಲಯದಲ್ಲಿ ಇಲಾಖೆಯ ವರ್ಚಸ್ಸು ವೃದ್ಧಿಸುವ ಉದ್ದೇಶವಾಗಿರುತ್ತದೆ.



