ದಾವಣಗೆರೆ: ಅಂಬುಲೆನ್ಸ್ , ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದೆ. ಜಿಲ್ಲೆಯ ನ್ಯಾಮತಿಯ ಸವಳಂಗ ರಸ್ತೆಯ ಆಸ್ಪತ್ರೆಯ ಅಂಬಲೆನ್ಸ್ನಲ್ಲಿ ಕರ್ತ್ಯವ್ಯದಲ್ಲಿದ್ದ ಸ್ಟಾಫ್ ನರ್ಸ್ ಸಾವನ್ನಪ್ಪಿದ್ದಾರೆ.
ನ್ಯಾಮತಿ ತಾಲ್ಲೂಕಿನ ಶಿಕಾರಿಪುರ-ಸವಳಂಗ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸವಳಂಗ ಆಸ್ಪತ್ರೆಯ ಅಂಬಲೆನ್ಸ್ನಲ್ಲಿ ಕರ್ತ್ಯವ್ಯದಲ್ಲಿದ್ದ ಸ್ಟಾಫ್ ನರ್ಸ್ ವಿಶ್ವನಾಥ ಮನಗೊಳಿ (30) ಅವರು ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ವಿಶ್ವನಾಥನಗೊಳಿ ಆಸ್ಪತ್ರೆಯಲ್ಲಿ ಮೂರೂವರೆ ವರ್ಷದಿಂದ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ರೋಗಿಯೊಬ್ಬರನ್ನು ಅಂಬ್ಯುಲೆನ್ಸ್ನಲ್ಲಿಶಿವಮೊಗ್ಗಕ್ಕೆ ಬಿಟ್ಟು ವಾಪಸ್ ಬರುವಾಗಿ ಅಪಘಾತ ಸಂಭವಿಸಿದೆ.
ವಿಶ್ವನಾಥ್, ಆಂಬುಲೆನ್ಸ್ ಚಾಲಕ ಸಿದ್ದಪ್ಪ ಹಾಗೂ ಸೋಮೇಶಿ,ಕ್ಯಾಂಟರ್ ಚಾಲಕ ಬಲ್ವಿಂದರ್ ಸಿಂಗ್ ಗೆ ಗಾಯವಾಗಿದ್ದವು. ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಶ್ವನಾಥ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



