ದಾವಣಗೆರೆ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ಜಾನುವಾರು ಪೊಲೀಸರು ರಕ್ಷಣೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸತು ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿಯಿಂದ ಬೆಂಗಳೂರು ಕಡೆಗೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರುಗೆ ರಾಷ್ಟ್ರೀಯ ಹೆದ್ದಾರಿ 48ರ ಹದಡಿ ರಸ್ತೆಯ ಅಂಡರ್ ಬ್ರಿಡ್ಜ್ನಲ್ಲಿ ಅಶೋಕ್ ಲೇಲ್ಯಾಂಡ್ ವಾಹನ ತಪಾಸಣೆ ನಡೆಸಿಧದಾಗ 4 ಎಮ್ಮೆ, 6 ಕರುಗಳು, 2 ಹಸುಗಳು, 1 ಎಮ್ಮೆ ಕರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಈ ಜಾನುವಾರುಗಳ ಒಟ್ಟು ಮೌಲ್ಯ 1ಲಕ್ಷ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.
ವಾಹನ ಚಾಲಕ ಬೂದಾಳ್ ರಸ್ತೆಯ ಶೌಕತ್ ಅಲಿ, ಅರೀಫ್ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಜಾನುವಾರು ಖರೀದಿಸಿದ ದಾಖಲೆ ತೋರಿಸಿಲ್ಲ. ಹೀಗಾಗಿ ಜಾನುವಾರು ವಶಕ್ಕೆ ಪಡೆದುವವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



