ದಾವಣಗೆರೆ: ಎಸ್ಬಿಐ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಬಂದ ಅಪರಿಚಿತರಿಗೆ ತಮ್ಮ ಮೊಬೈಲ್ ಗೆ ಬಂದ ಒಟಿಪಿ ಹೇಳಿ ಶಿಕ್ಷಕರೊಬ್ಬರು 89,999 ರೂ.ಹಣ ಕಳೆದುಕೊಂಡ ಘಟನೆ ನಡೆದಿದೆ.
ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ಮಂಜುನಾಥ್ ಆರ್. ಹಣ ಕಳೆದುಕೊಂಡ ಶೀಕ್ಷಕ. ಎಸ್ಬಿಐ ಕ್ರೆಡಿಟ್ ಕಾರ್ಡ್ ಲಾಕ್ ಮಾಡುತ್ತೇವೆ. ಅದಕ್ಕೆ ಡೆಬಿಟ್ ಕಾರ್ಡ್ನ ಮಾಹಿತಿ ನೀಡಿ ಅಪರಿಚಿತರು ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಬಂದು ಕೇಳಿದ್ದಾರೆ. ಅವರ ಮಾತು ನಂಬಿದ ಮಂಜುನಾಥ್, ಡೆಬಿಟ್ ಕಾರ್ಡ್ ಮಾಹಿತಿಯ ಜೊತೆಗೆ ಒಟಿಪಿ ಸಂಖ್ಯೆಯನ್ನು ಹೇಳಿದ್ದಾರೆ. ಆಗ ಮಂಜುನಾಥ್ ಅವರ ಖಾತೆಯಿಂದ 89,999 ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



