ಮಲ್ಲಿಕಾರ್ಜುನಗೆ ಸಂಸ್ಕಾರ ಇಲ್ಲ; ನನ್ನ ಆಸ್ತಿ ಲೆಕ್ಕ ಕೇಳೋಕೆ ಇವನ್ಯಾರು..?; ನಾನು ಭ್ರಷ್ಟಾಚಾರ ಮಾಡಿದ್ದು ಸಾಬೀತು ಮಾಡಿದ್ರೆ ನನ್ನ ಒಟ್ಟು ಆಸ್ತಿ ಅವನಿಗೆ ಬರೆದು ಕೊಡ್ತೀನಿ; ಸಿದ್ದೇಶ್ವರ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಕಿಡಿಕಾರಿದ ಸಂಸದ ಜಿ.ಎಂ.‌ಸಿದ್ದೇಶ್ವರ, ತನಗಿಂತ ಹಿರಿಯರಿಗೆ ಗೌರವ ಕೊಡದೇ ಏಕ ವಚನದಲ್ಲಿಯೇ ಮಾತನಾಡುವ ಮಲ್ಲಿಕಾರ್ಜುನ್ ಗೆ ಸಂಸ್ಕಾರ ಇಲ್ಲ. ನನ್ನ ಆಸ್ತಿ ಬಗ್ಗೆ ಕೇಳೋಕೆ ಇವನ್ಯಾರು..? ಅದನ್ನು ಕೇಳಕ್ಕೆ ತೆರಿಗೆ ಇಲಾಖೆ ಇದೆ. ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ನಾನು ಭ್ರಷ್ಟಾಚಾರ ಮಾಡಿದ್ದು, ಅವರು ಸಾಬೀತು ಮಾಡಿದ್ರೆ ನನ್ನ ಒಟ್ಟು ಆಸ್ತಿ ಅವನಿಗೆ ಬರೆದು ಕೊಡ್ತೀನಿ ಎಂದು ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಇಂದಿನಿಂದಲೂ ಆಸ್ತಿ ಇದೆ. ಮುಂದಕ್ಕೂ ಆಸ್ತಿ ಮಾಡ್ತೀನಿ. ನನ್ನ ಆಸ್ತಿ ಬಗ್ಗೆ ಮಾಡವುದಕ್ಕೆ ಇವನ್ಯಾರು. ನನ್ನ ಆಸ್ತಿ ಲೆಕ್ಕ ಕೇಳದಕ್ಕೆ ತೆರಿಗೆ ಇಲಾಖೆ ಇದೆ. ನಾನು ಆಸ್ತಿ ಮಾಡಿರುವುದೂ ಯಾವುದೇ ಭ್ರಷ್ಟಾಚಾರ ಮಾಡಿದ ದುಡ್ಡಿನಿಂದಲ್ಲ, ನನ್ನ ಸ್ವಂತ ದುಡಿಮೆಯಿಂದ ಮಾಡಿದ್ದೇನೆ. ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಕಾಮಗಾರಿ ತನಿಖೆ ಮಾಡುತ್ತೇವೆ ಎಂದಿದ್ದಾರೆ. 2013ರಿಂದಲೂ ಎಲ್ಲಾ ತನಿಖೆ ಮಾಡಲಿ. ಅವರದೇ ಸರ್ಕಾರ ಇದೆ ಎಂದರು.

ಕಾಲೇಜ್ ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಗೂ ಕಟ್ಟುತ್ತೇವೆ. ಇನ್ನೂ ಆಸ್ತಿನೂ ಖರೀದಿ ಮಾಡುತ್ತೇವೆ. ಅದಕ್ಕೆ ತೆರಿಗೆನೂ ಕಟ್ಟುತ್ತೇನೆ. 1996 ರಲ್ಲಿಯೇ ನಾನು ಸರ್ಕಾರಕ್ಕೆ 1.80 ಕೋಟಿ ತೆರಿಗೆ ಕಟ್ಟಿದ್ದೇನೆ‌. 1993, 96,97ರಲ್ಲಿ ನಮ್ಮ ಮಾವರಾದ ಶಾಮನೂರು ಶಿವಶಂಕರಪ್ಪಗೆ ಸಾಲನೂ ಕೊಟಿದ್ದೇನೆ. ಸಕಾಲಕ್ಕೆ ಸಾಲ ವಾಪಸ್ ಕೊಡದಿದ್ದಕ್ಕೆ ಅದಕ್ಕೆ ಬಡ್ಡಿನೂ ಪಡೆದಿದ್ದೇನೆ. ನಾನು ಈಗಲೂ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಗೌರವ ‌ಕೊಡುತ್ತೇನೆ. ಅದು ನಮ್ಮ ತಂದೆ- ತಾಯಿ ಕಲಿಸಿದ ಸಂಸ್ಕಾರ. ಆದರೆ, ಮಲ್ಲಿಕಾರ್ಜುನಗೆ ಹಿರಿಯರ ಬಗ್ಗೆ ಗೌರವ ಇಲ್ಲ. ಏಕ ವಚನದಲ್ಲಿಯೇ ಮಾತನಾಡುತ್ತಾ‌ನೆ. ಇದು ಅವನ ಸಂಸ್ಕಾರ ತೋರಿಸುತ್ತದೆ. ಅವನು ಎಷ್ಟೇ ಬೈದರೂ ದೇವರು ನಮಗೆ ಒಳ್ಳೆದೇ ಮಾಡಿದ್ದಾನೆ. ನಾನು ಸಹ ಅವರಿಗೆ ದೇವರು ಒಳ್ಳೆದು ಮಾಡಲಿ ಎಂದು ಬಯಸುತ್ತೇನೆ. ಕೆಟ್ಟದು ಬಯಸಲ್ಲ ಎಂದರು.

ನಮ್ಮ ಊರ ಬಳಿ ಸಾಗುತ್ತಿದ್ದ ಅದಿರು ಲಾರಿ ನಿಲ್ಲಿಸಿದರ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನು ಪರಿಸರ ಇಲಾಖೆ ಮಾಡಿದ್ದರೆ ನಾನು ಸ್ವಾಗತಿಸುತ್ತೇನೆ. ಇದಕ್ಕೂ ನನಗೂ ಸಂಬಂಧವಿಲ್ಲ. ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ, ನಮ್ಮ ಊರಿನ ಬಳಿ ಅದಿರು ಸಾಗಾಟ ನಿಲ್ಲಿಸುವಂತೆ ಮನವಿ ಮಾಡಿದ್ದೆ. ಆದರೆ,ಅದು ನಿಂತಿರಲಿಲ್ಲ.‌ ಈಗ ನಿಂತಿದೆ. ನಾವು ಮೈನಿಂಗ್ ನಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ, ಹಿಂದೆ ನಮ್ಮ ಮೇಲೆ ಕಾರ್ಜುನ್ ಕೇಸ್ ಹಾಕಿಸಿದ್ದರೂ, ಕೋರ್ಟ್ ಗೆ ಸೂಕ್ತ ದಾಖಲಿ ಒದಗಿಸದೇ ಕೇಸ್ ಬಿದ್ದ ಹೋಯ್ತು ಎಂದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *