Connect with us

Dvgsuddi Kannada | online news portal | Kannada news online

ದಾವಣಗೆರೆ; ಕರಿಯಮ್ಮ ದೇವರಿಗೆ ಬಿಟ್ಟಿದ್ದ ಕೋಣ ಗುದ್ದಿ, ಅದೇ ದೇವಸ್ಥಾನ ಪೂಜಾರಿ ಸಾವು..!

IMG 20230413 112157

ದಾವಣಗೆರೆ

ದಾವಣಗೆರೆ; ಕರಿಯಮ್ಮ ದೇವರಿಗೆ ಬಿಟ್ಟಿದ್ದ ಕೋಣ ಗುದ್ದಿ, ಅದೇ ದೇವಸ್ಥಾನ ಪೂಜಾರಿ ಸಾವು..!

ದಾವಣಗೆರೆ; ಕರಿಯಮ್ಮ ದೇವರಿಗೆ ಬಿಟ್ಟಿದ್ದ ಕೋಣ, ಅದೇ ದೇವಸ್ಥಾನದ ಪೂಜಾರಿಗೆ ಗುದ್ದಿದೆ. ಕೋಣ ಗುದ್ದಿದ ರಭಸಕ್ಕೆ ಪೂಜಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲಾಯ ಹೊನ್ನಾಳಿ ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ನಡೆದಿದೆ.

ಬಳ್ಳಾಪುರ ಗ್ರಾಮದ ತಿಮ್ಮಪ್ಪ ಊರಿನ ಕರಿಯಮ್ಮ ದೇವಸ್ಥಾನ ಪೂಜಾರಿಯಾಗಿದ್ದರು. ಬೆಳಗ್ಗೆ ದೇವಸ್ಥಾನ ಪೂಜೆ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ, ನಂತರ ಮಧ್ಯಾಹ್ನ ಅಡಿಕೆ ತೋಟಕ್ಕೆ ಹೋಗುದ್ದಾಗ ಈ ಘಟನೆ ನಡೆದಿದೆ. ತೋಟದಲ್ಲಿಯೇ ಇದ್ದ ಕೋಣ ಪೂಜಾರಿ ತಿಮ್ಮಪ್ಪ‌ ನೋಡಿದ ತಕ್ಷಣ ಅಟ್ಟಾಡಿಸಿಕೊಂಡು ಹೋಗಿ ಕೊಂಬಿನಿಂದ ತಿವಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ತಿಮ್ಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಬಿಳಿ ಬಟ್ಟೆ ಹಾಕಿಕೊಂಡು ಬಂದವರ ಮೇಲೆ ಕೋಣ ದಾಳಿ ಮಾಡುತ್ತಿತ್ತು ಎನ್ನಲಾಗಿದೆ. ಆದರೆ, ಸಾಯುವ ಮಟ್ಟಿಗೆ ದಾಳಿ ಮಾಡಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಕೋಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top