Connect with us

Dvgsuddi Kannada | online news portal | Kannada news online

ಬಿಜೆಪಿ ಎರಡನೇ ಪಟ್ಟಿ; ದಾವಣಗೆರೆ ಉತ್ತರ ಲೋಕಿಕೆರೆ ನಾಗರಾಜ್ , ದಕ್ಷಿಣ ಅಜಯ್ , ಚನ್ನಗಿರಿ ಶಿವಕುಮಾರ್ , ಮಾಯಕೊಂಡ ಬಸವರಾಜ್ ನಾಯ್ಕ್ ಗೆ ಟಿಕೆಟ್ ..!

n483887714167981475766736cdc590ea39251f4eb31b591d7189567951f097333fdbeabd32bd64b60054b7

ಪ್ರಮುಖ ಸುದ್ದಿ

ಬಿಜೆಪಿ ಎರಡನೇ ಪಟ್ಟಿ; ದಾವಣಗೆರೆ ಉತ್ತರ ಲೋಕಿಕೆರೆ ನಾಗರಾಜ್ , ದಕ್ಷಿಣ ಅಜಯ್ , ಚನ್ನಗಿರಿ ಶಿವಕುಮಾರ್ , ಮಾಯಕೊಂಡ ಬಸವರಾಜ್ ನಾಯ್ಕ್ ಗೆ ಟಿಕೆಟ್ ..!

ನವದೆಹಲಿ; ವಿಧಾನಸಭೆ ಚುನಾವಣೆಗೆ ಬಿಜೆಪಿಯು ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.ಎರಡನೇ ಪಟ್ಟಿಯಲ್ಲಿ 23 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿಯೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರರ್ ಕ್ಷೇತ್ರ ಘೋಷಣೆಯಾಗಿಲ್ಲ. ದಾವಣಗೆರೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ದಾವಣಗೆರೆ ಉತ್ತರ-ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷಿಣ-ಅಜಯ್ ಕುಮಾರ್, ಮಾಯಕೊಂಡ-ಬಸವರಾಜ್ ನಾಯ್ಕ್, ಚನ್ನಗಿರಿ-ಶಿವಕುಮಾರ್ ಆಯ್ಕೆ ಮಾಡಲಾಗುದೆ.

ಈಗಾಗಲೇ ಹೊನ್ನಾಳಿ ರೇಣುಕಾಚಾರ್ಯ, ಹರಿಹರ ಬಿ.ಪಿ. ಹರೀಶ್, ಜಗಳೂರು ಎಸ್.ವಿ ರಾಮಚಂದ್ರಗೆ ಟಿಕೆಟ್ ನೀಡಲಾಗುತ್ತು. ಎರಡನೇ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಸೇರಿ 7 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಮಂಗಳವಾರ 189 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಬಿಜೆಪಿ ಇದೀಗ ಒಟ್ಟು 212 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇನ್ನೂ 12 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.

  • 23 ಮಂದಿ ಅಭ್ಯರ್ಥಿಗಳ ವಿವರ
  • ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್
  • ಬಸವನ ಬಾಗೇವಾಡಿ-ಎಸ್.ಕೆ.ಬೆಳ್ಳುಬ್ಬಿ
  • ಇಂಡಿ-ಕಾಸಗೌಡ ಬಿರಾದಾರ್
  • ಗುರುಮಿಠ್ಕಲ್-ಲಲಿತಾ ಅಣ್ಣಾಪುರ್
  • ಬೀದರ್-ಈಶ್ವರ್ ಸಿಂಗ್ ಠಾಕೂರ್
  • ಭಾಲ್ಕಿ-ಪ್ರಕಾಶ್ ಖಂಡ್ರೆ
  • ಗಂಗಾವತಿ-ಪರಣ್ಣ ಮುನವಳ್ಳಿ
  • ಕಲಘಟಗಿ-ನಾಗರಾಜ್ ಛಬ್ಬಿ
  • ಹಾನಗಲ್-ಶಿವರಾಜ್ ಸಜ್ಜನರ್
  • ಹಾವೇರಿ-ಗವಿಸಿದ್ದಪ್ಪ ದ್ಯಾಮನ್ನವರ್
  • ಹರಪನಹಳ್ಳಿ-ಕರುಣಾಕರ ರೆಡ್ಡಿ
  • ದಾವಣಗೆರೆ ಉತ್ತರ-ಲೋಕಿಕೆರೆ ನಾಗರಾಜ್
  • ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
  • ಮಾಯಕೊಂಡ-ಬಸವರಾಜ್ ನಾಯ್ಕ್
  • ಚನ್ನಗಿರಿ-ಶಿವಕುಮಾರ್
  • ಬೈಂದೂರು-ಗುರುರಾಜ್ ಗಂತಿಹೊಳೆ
  • ಮೂಡಿಗೆರೆ-ದೀಪಕ್ ದೊಡ್ಡಯ್ಯ
  • ಗುಬ್ಬಿ-ಎಸ್.ಡಿ.ದಿಲೀಪ್ ಕುಮಾರ್
  • ಶಿಡ್ಲಘಟ್ಟ-ರಾಮಚಂದ್ರ ಗೌಡ
  • ಕೆಜಿಎಫ್-ಅಶ್ವಿನಿ ಸಂಪಂಗಿ
  • ಶ್ರವಣಬೆಳಗೊಳ-ಚಿದಾನಂದ
  • ಅರಸೀಕೆರೆ-ಜಿ.ವಿ.ಬಸವರಾಜು
  • ಎಚ್.ಡಿ.ಕೋಟೆ-ಕೃಷ್ಣ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top