ದಾವಣಗೆರೆ: ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ವಿವಿಧ 8 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿ. ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

  • ಹುದ್ದೆಗಳ ವಿವರ
  • ವ್ಯವಸ್ಥಾಪಕರು; 1ಹುದ್ದೆ, ಸಾಮಾನ್ಯ
  • ಲೆಕ್ಕಾಧಿಕಾರಿ; 1 ಹುದ್ದೆ, ಸಾಮಾನ್ಯ
  • ಕಿರಿಯ ಸಹಾಯಕರ; 4 ಹುದ್ದೆ, ಸಾಮಾನ್ಯ
  • ಅಟೆಂಡರ್ /ಸಿಪಾಯಿ; 2 ಹುದ್ದೆ, ಎಸ್ಟಿ 1, ಒಬಿಸಿ 1

ವಯೋಮಿತಿ: 35 ರಿಂದ 38 ವರ್ಷಗಳಾಗಿರಬೇಕು. ವೇತನ; ಮಾಸಿಕ 20 ಸಾವಿರದಿಂದ 36 ಸಾವಿರ, ವಿದ್ಯಾರ್ಹತೆ; ಅಂಗೀಕೃತ ಸಂಸ್ಥೆ, ವಿದ್ಯಾಲಯದಿಂದ ಹುದ್ದೆಗೆ ತಕ್ಕಂತೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪಡೆದಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

  • ಸೂಚನೆಗಳು : 1) ಮೇಲ್ಕಾಣಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-04-2023ರ ಸಂಜೆ 5-00 ಗಂಟೆಯೊಳಗೆ ಸಲ್ಲಿಸತಕ್ಕದ್ದು.
  • 2) ಅಭ್ಯರ್ಥಿಗಳು ಅರ್ಜಿಗಳನ್ನು ಬ್ಯಾಂಕಿನ ಕೆಲಸದ ವೇಳೆಯಲ್ಲಿ ಅರ್ಜಿ ಶುಲ್ಕ ರೂ. 1000-00ಗಳನ್ನು ಮತ್ತು ಹಿಂದುಳಿದ ವರ್ಗ, ಪ.ಜಾ. ಮತ್ತು ಪ.ಪಂ. ಅಭ್ಯರ್ಥಿಗಳು ರೂ. 500-00ಗಳನ್ನು ಕೌಂಟರ್ನಲ್ಲಿ ಪಾವತಿಸಿ ಪಡೆದುಕೊಳ್ಳಬಹುದು.
  • 3) ಅರ್ಜಿಯೊಂದಿಗೆ ಅಭ್ಯರ್ಥಿಯು ಇತ್ತೀಚಿನ ಒಂದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು ಅಂಟಿಸಿರಬೇಕು.
  • 4) ವಿದ್ಯಾರ್ಹತೆಯ 1) ಮಾರ್ಕ್ಸ್‌ ಕಾರ್ಡ್‌ಗಳು 2) ಪದವಿ ಸರ್ಟಿಫಿಕೇಟ್ಗಳ ಸ್ವಯಂ ದೃಢೀಕೃತ ಜೆರಾಕ್ಸ್‌ ಪ್ರತಿಗಳನ್ನು ಲಗತ್ತಿಸಿರಬೇಕು.
  • 5) ವಿಳಾಸದ ದೃಢೀಕರಣ ಪ್ರತಿ (ಆಧಾರ್ ಕಾರ್ಡ್‌
  • 6) ಹಾಲಿ ಕೆಲಸ ಮಾಡುತ್ತಿರುವ / ಈ ಹಿಂದೆ ಕೆಲಸ ಮಾಡಿದ ಸಂಸ್ಥೆಯಿಂದ ಅನುಭವ ದೃಢೀಕರಣ ಪತ್ರ
    ಒದಗಿಸುವುದು.
  • 7) ಕಂಪ್ಯೂಟರ್ ಶಿಕ್ಷಣದಲ್ಲಿ ತೇರ್ಗಡೆ ಹೊಂದಿದ ದೃಢೀಕರಣ ಪ್ರತಿಗಳನ್ನು ಹಾಗೂ ಇತರೆ ಅರ್ಹತೆಗಳಿದ್ದಲ್ಲಿ ಅವುಗಳ ದಾಖಲೆ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕೊನೆಯ ದಿನಾಂಕ 20-4-2023ರ ಸಾಯಂಕಾಲ 5-00 ಗಂಟೆಯೊಳಗೆ ಬ್ಯಾಂಕ್ಗೆ ಸಲ್ಲಿಸತಕ್ಕದ್ದು.
  • 8) ಅರ್ಜಿದಾರರು ತಪ್ಪು ಮಾಹಿತಿ ನೀಡಿದಲ್ಲಿ ಅಥವಾ ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತವಾಗುತ್ತವೆ.

ವಿಳಾಸ: ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿ. #1058/3-4, ಜಯದೇವ ಸರ್ಕಲ್ ಹತ್ತಿರ, ಲಾಯರ್ ರೋಡ್, ಕೆ.ಬಿ. ಬಡಾವಣೆ, ದಾವಣಗೆರೆ-577 002. ಫೋನ್ : 08192 257901/255875, 230304, e-mail : muruga.bank@yahoo.com.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *