Connect with us

Dvgsuddi Kannada | online news portal | Kannada news online

202ನೇ ಭೀಮಾ ಕೋರೆಗಾಂವ್ ವಿಜಯೋತ್ಸವ   

ದಾವಣಗೆರೆ

202ನೇ ಭೀಮಾ ಕೋರೆಗಾಂವ್ ವಿಜಯೋತ್ಸವ   

ಡಿವಿಜಿ ಸುದ್ದಿ, ದಾವಣಗೆರೆ: ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ) ವತಿಯಿಂದ 202 ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ನಗರದ ಅಂಬೇಡ್ಕರ್ ವೃತ್ತದಲ್ಲಿರುವ  ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಚರಿಸಿದರು.

ದಸಂಸದ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ, ಭೀಮಾ ಕೋರೆಗಾಂವ್ ಈ ಹೆಸರನ್ನು ಹೇಳಿದ ತಕ್ಷಣವೇ ಸ ತುಳಿತಕ್ಕೆ ಸಿಲುಕಿ ಜರ್ಜಿತವಾಗಿರುವ ಮನಸುಗಳಿಗೆ ಈಗಲೂ ವರ್ಣಿಸಲಾಗದ ರೋಮಾಂಚನ. ಇತಿಹಾಸದಲ್ಲಿ ಮುಚ್ಚಿ ಹೋಗಿರುವ ಆ ಬೃಹತ್ ಕಥನ. ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳೆಂಬ ಸಾಮಾಜಿಕ ಅನಿಷ್ಠಕ್ಕೆ ನೀಡಿದ ತಿರುಗೇಟು ಅದು. ಸೈನಿಕರ ಶೌರ್ಯದ ಪ್ರತೀಕವೇ ಈ ಭೀಮಾ ಕೋರೇಗಾಂವ್ ಎಂದರು.

ಈ ಸಂದರ್ಭದಲ್ಲಿ ದಸಂಸ ಹಿರಿಯ ಮುಖಂಡರುಗಳಾದ ಜಿಎನ್ ಸತ್ಯಪ್ಪ ಗೌರಿಪುರ, ಬುಳುಸಾಗರದ ಸಿದ್ರಾಮಣ್ಣ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ  ಕೋಗಲೂರು ಕುಮಾರ್,  ಜಿಗಳೆ ಹಾಲೇಶ್ , ಹನುಮಂತಪ್ಪ ಬೇತೂರು , ಮಹಾಂತೇಶ್ , ಯಶವಂತ , ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top