ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು,124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಮಾ.25) ಬಿಡುಗಡೆ ಮಾಡಿದೆ.
ಎಐಸಿಸಿ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇಂದು ಬೆಳಗ್ಗೆ ಪ್ರಕಟಿಸಿದೆ. ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ
ಮಾಡಲಿದ್ದಾರೆ. ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧಿಸಲಿದ್ದಾರೆ. ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರದಿಂದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಾಯಕೊಂಡದಿಂದ ಕೆ.ಎಸ್. ಬಸವರಾಜುಗೆ ಟಿಕೆಟ್ ಘೋಷಣೆಯಾಗಿದೆ.
Congress party announces the first list of 124 candidates for Karnataka Assembly Elections.
Names of former CM Siddaramaiah, and State party president DK Shivakumar are present in the first list. pic.twitter.com/TC9vXJfrX5
— ANI (@ANI) March 25, 2023
- ಚಿಕ್ಕೋಡಿ ಸದಲದ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ
- ಕಾಗವಾಡಕ್ಕೆ ಭರಮ ಗೌಡ ಆಲ ಗೌಡ ಕಾಗೆ
- ಕುಡಚಿ ಎಸ್ಸಿ ಕ್ಷೇತ್ರಕ್ಕೆ ಮಹೇಂದ್ರ ಕೆ ತಮ್ಮಣ್ಣನವರ್
- ಹುಕ್ಕೇರಿಗೆ ಎ ಬಿ ಪಾಟೀಲ್
- ಯಮಕನಮರಡಿ ಎಸ್ ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ
- ಬೆಳಗಾವಿ ಗ್ರಾಮಂತರ ಲಕ್ಷ್ಮಿ ಹೆಬ್ಬಾಳ್ಕರ್
- ಖಾನಾಪುರ ಅಂಜಲಿ ನಿಂಬಾಳ್ಕರ್
- ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ
- ರಾಮದುರ್ಗ ದಿಂದ ಅಶೋಕ್ ಎಂ ಪಟ್ಟಣ್
- ಜಮಖಂಡಿ ಇಂದ ಆನಂದ ಸಿದ್ದು ನ್ಯಾಮಗೌಡ
- ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್
- ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ
- ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್
- ಬಬಲೇಶ್ವರದಿಂದ ಎಂಬಿ ಪಾಟೀಲ್
- ಇಂಡಿಯಿಂದ ಯಶವಂತರಾಯ ಗೌಡ ವಿ ಪಾಟೀಲ್
- ಜೇವರ್ಗಿಯಿಂದ ಡಾ. ಅಜಯ್ ಸಿಂಗ್
- ಸುರಪುರದಿಂದ ರಾಜ ವೆಂಕಟಪ್ಪ ನಾಯಕ್
- ಶಹಾಪುರದಿಂದ ಶರಣಬಸಪ್ಪ ಗೌಡ
- ಚಿತ್ತಾಪುರ ಎಸ್ ಟಿ ಕ್ಷೇತ್ರದಿಂದ ಪ್ರಿಯಾಂಕ ಖರ್ಗೆ
- ಸೇಡಂ ನಿಂದ ಡಾ ಶರಣಪ್ರಕಾಶ್ ಪಾಟೀಲ್
- ಚಿಂಚೋಳ್ಳಿ ಎಸ್ ಸಿ ಕ್ಷೇತ್ರಕ್ಕೆ ಸುಭಾಷ್ ವಿ ರಾಥೋಡ್
- ಕಲಬುರ್ಗಿ ಉತ್ತರ ಕ್ಷೇತ್ರಕ್ಕೆ ಖನಿಜ ಫಾತಿಮಾ
- ಆಳಂದ ಕ್ಷೇತ್ರದಿಂದ ಬಿಆರ್ ಪಾಟೀಲ್
- ಹುಮ್ನಾಬಾದ್ ನಿಂದ ರಾಜಶೇಖರ್ ವಿ ಪಾಟೀಲ್
- ಬೀದರ್ ದಕ್ಷಿಣದಿಂದ ಅಶೋಕ್ ಖೇಣಿ
- ಬೀದರ್ ನಿಂದ ರಹೀಮ್ ಖಾನ್
- ಬಾಲ್ಕಿಯಿಂದ ಈಶ್ವರ್ ಖಂಡ್ರೆ
- ರಾಯಚೂರು ಗ್ರಾಮಾಂತರ ಎಸ್ ಟಿ ಕ್ಷೇತ್ರಕ್ಕೆ ಬಸವನಗೌಡ ದದ್ದಲ್
- ಮಸ್ಕಿ ಎಸ್ಟಿ ಕ್ಷೇತ್ರಕ್ಕೆ ಬಸವನಗೌಡ ತುರುವಿಹಾಳ
- ಕುಷ್ಟಗಿ ವಿಧಾನಸಭೆ ಕ್ಷೇತ್ರದಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ
- ಕನಕಗಿರಿ ಎಸ್ ಸಿ ವಿಧಾನಸಭೆ ಕ್ಷೇತ್ರದಿಂದ ಶಿವರಾಜ್ ಸಂಗಪ್ಪ ತಂಗಡಗಿ
- ಯಲಬುರ್ಗಾ ದಿಂದ ಬಸವರಾಜ್ ರಾಯರೆಡ್ಡಿ
- ಕೊಪ್ಪಳದಿಂದ ಕೆ ರಾಘವೇಂದ್ರ
- ಗದಗ್ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್
- ಪೂರ್ಣದಿಂದ ಬಿಎಸ್ ಪಾಟೀಲ್
- ಹುಬ್ಬಳ್ಳಿ ಧಾರವಾಡ ಪೂರ್ವದಿಂದ ಪ್ರಸಾದ್ ಅಬ್ಬಯ್ಯ
- ಹಳಿಯಾಳ ಕ್ಷೇತ್ರಕ್ಕೆ ಆರ್ ವಿ ದೇಶಪಾಂಡೆ
- ಕಾರವಾರ ಸತೀಶ್ ಸೈಲ್
- ಭಟ್ಕಳ ಮಂಕಾಳ ಸುಬ್ಬಾ ವಿದ್ಯಾ
- ಹಾನಗಲ್ ಶ್ರೀನಿವಾಸ್ ವಿ ಮಾನೆ
- ಹಾವೇರಿ ಎಸ್ ಸಿ ರುದ್ರಪ್ಪ ಲಮಾಣಿ
- ಬ್ಯಾಡಗಿ ಬಸವರಾಜ್ ಎಂ ಶಿವಣ್ಣನವರ್
- ಹಿರೇಕೆರೂರು ಯು ಬಿ ಬಣಕಾರ್
- ರಾಣೆಬೆನ್ನೂರು ಪ್ರಕಾಶ್ ಕೆ ಕೋಳಿವಾಡ
- ಹಡಗಲಿ ಎಸ್ ಟಿ ಪಿ ಪರಮೇಶ್ವರ್ ನಾಯಕ್
- ಹಗರಿಬೊಮ್ಮನಹಳ್ಳಿ ಎಸ್ ಕ್ಷೇತ್ರಕ್ಕೆ ಭೀಮಾ ನಾಯಕ್
- ವಿಜಯನಗರಕ್ಕೆ ಎಚ್ ಆರ್ ಗವಿಯಪ್ಪ
- ಕಂಪ್ಲಿ ಎಸ್ ಟಿ ಕ್ಷೇತ್ರಕ್ಕೆ ಜೆಎನ್ ಗಣೇಶ್
- ಬಳ್ಳಾರಿ ಎಸ್ ಟಿ ಕ್ಷೇತ್ರಕ್ಕೆ ಬಿ ನಾಗೇಂದ್ರ
- ಸಡೂರು ಎಸ್ ಟಿ ಕ್ಷೇತ್ರಕ್ಕೆ ಈ ತುಕಾರಾಂ
- ಚಳ್ಳಕೆರೆ ಎಸ್ ಟಿ ಕ್ಷೇತ್ರಕ್ಕೆ ಟಿ ರಘುಮೂರ್ತಿ
- ಹಿರಿಯೂರು ಕ್ಷೇತ್ರಕ್ಕೆ ಡಿ ಸುಧಾಕರ್
- ಹೊಸದುರ್ಗ ಕ್ಷೇತ್ರಕ್ಕೆ ಗೋವಿಂದಪ್ಪ ಬಿಜಿ
- ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಎಸ್ ಎಸ್ ಮಲ್ಲಿಕಾರ್ಜುನ
- ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ
- ಮಾಯಕೊಂಡ ಎಸಿ ಕ್ಷೇತ್ರಕ್ಕೆ ಕೆಎಸ್ ಬಸವರಾಜ್
- ಭದ್ರಾವತಿಯಿಂದ ಸಂಗಮೇಶ್ವರ ಬಿಕೆ
- ಸೊರಬ ಕ್ಷೇತ್ರಕ್ಕೆ ಮಧು ಬಂಗಾರಪ್ಪ
- ಸಾಗರ್ ವಿಧಾನಸಭೆ ಕ್ಷೇತ್ರಕ್ಕೆ ಗೋಪಾಲಕೃಷ್ಣ ಬೇಳೂರು
- ಬೈಂದೂರು ಕ್ಷೇತ್ರಕ್ಕೆ ಕೆ ಗೋಪಾಲ್ ಪೂಜಾರಿ
- ಕುಂದಾಪುರದಿಂದ ಎಂ ದಿನೇಶ್ ಹೆಗಡೆ, ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆ



