ದಾವಣಗೆರೆ: ದಾವಣಗೆರೆ ಚಿತ್ರಕಲಾ ಪರಿಷತ್, ಭರತ್ ಸೇವಾ ಟ್ರಸ್ಟ್ ಹಾಗೂ ಬಾಡಿ ರಾಕರ್ಸ್ ಜಿಮ್ ಸಹಯೋಗದಲ್ಲಿ ಫೆ. 26ರಂದು ಚಿತ್ರಸಂತೆ ಆಯೋಜಿಸಲಾಗಿದೆ.
ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಎ.ವಿ.ಕೆ ಕಾಲೇಜು ರಸ್ತೆಯಲ್ಲಿ 2ನೇ ವರ್ಷದ ರಾಜ್ಯಮಟ್ಟದ ಚಿತ್ರಸಂತೆ ನಡೆಯಲಿದ್ದು, ಸಕಲ ಸಿದ್ಧತೆ ನಡೆಸುತ್ತಿದ್ದೇವೆ. ಚಿತ್ರಸಂತೆಯಲ್ಲಿ 150ಕ್ಕೂ ವಿವಿಧ ಜಿಲ್ಲೆಯ ಸ್ಟಾಲ್ ಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಭಾಗವಹಿಸುವ ಕಲಾವಿದರಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿಗಳಿಗೆ 9844262279, 9448404419 ಸಂಪರ್ಕಿಸಬಹುದು. ಉತ್ತಮ ಕಲಾಕೃತಿಗಳು ಹಾಗೂ ಬೆಸ್ಟ್ ಸ್ಟಾಲ್ಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುವ ಕಲಾವಿದರಿಗೆ ಊಟ, ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಎಚ್.ಎಸ್.ಶಿವಶಂಕರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರನ್ನು ಆಹ್ವಾನಿಸಲಾಗುವುದು. ಪರಿಷತ್ ಕಾರ್ಯದರ್ಶಿ ಡಿ. ಶೇಷಾಚಲ, ವಿಜಯ್ ಜಾಧವ್, ರವಿ ಹುದ್ದಾರ್, ಅಶೋಕ್ ಗೋಪನಾಳ್, ಜೀವನ್, ಶಿವಕುಮಾರ್, ರವಿಕಿರಣ್, ರಾಕೇಶ್, ಸಿ.ಎನ್. ಸಂತೋಷ್, ಆನಂದ್, ಸಂಜು, ಗಣೇಶಾಚಾರ್ ಉಪಸ್ಥಿತರಿದ್ದರು.



