Connect with us

Dvgsuddi Kannada | online news portal | Kannada news online

ದಾವಣಗೆರೆ: ಫೆ.26 ರಂದು 2ನೇ ವರ್ಷದ ರಾಜ್ಯ ಮಟ್ಟದ ಚಿತ್ರಸಂತೆ

ಪ್ರಮುಖ ಸುದ್ದಿ

ದಾವಣಗೆರೆ: ಫೆ.26 ರಂದು 2ನೇ ವರ್ಷದ ರಾಜ್ಯ ಮಟ್ಟದ ಚಿತ್ರಸಂತೆ

ದಾವಣಗೆರೆ: ದಾವಣಗೆರೆ ಚಿತ್ರಕಲಾ ಪರಿಷತ್, ಭರತ್ ಸೇವಾ ಟ್ರಸ್ಟ್ ಹಾಗೂ ಬಾಡಿ ರಾಕರ್ಸ್ ಜಿಮ್ ಸಹಯೋಗದಲ್ಲಿ ಫೆ. 26ರಂದು ಚಿತ್ರಸಂತೆ ಆಯೋಜಿಸಲಾಗಿದೆ.

ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಎ.ವಿ.ಕೆ ಕಾಲೇಜು ರಸ್ತೆಯಲ್ಲಿ 2ನೇ ವರ್ಷದ ರಾಜ್ಯಮಟ್ಟದ ಚಿತ್ರಸಂತೆ ನಡೆಯಲಿದ್ದು, ಸಕಲ‌ ಸಿದ್ಧತೆ ನಡೆಸುತ್ತಿದ್ದೇವೆ. ಚಿತ್ರಸಂತೆಯಲ್ಲಿ 150ಕ್ಕೂ ವಿವಿಧ ಜಿಲ್ಲೆಯ ಸ್ಟಾಲ್‌ ಗಳಿಗೆ ಅವಕಾಶ ನೀಡಲಾಗುವುದು‌ ಎಂದು ತಿಳಿಸಿದರು.

ಭಾಗವಹಿಸುವ ಕಲಾವಿದರಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿಗಳಿಗೆ 9844262279, 9448404419 ಸಂಪರ್ಕಿಸಬಹುದು. ಉತ್ತಮ ಕಲಾಕೃತಿಗಳು ಹಾಗೂ ಬೆಸ್ಟ್ ಸ್ಟಾಲ್‌ಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುವ ಕಲಾವಿದರಿಗೆ ಊಟ, ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಎಚ್‌.ಎಸ್.ಶಿವಶಂಕರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರನ್ನು ಆಹ್ವಾನಿಸಲಾಗುವುದು. ಪರಿಷತ್ ಕಾರ್ಯದರ್ಶಿ ಡಿ. ಶೇಷಾಚಲ, ವಿಜಯ್ ಜಾಧವ್, ರವಿ ಹುದ್ದಾರ್, ಅಶೋಕ್ ಗೋಪನಾಳ್, ಜೀವನ್, ಶಿವಕುಮಾರ್, ರವಿಕಿರಣ್, ರಾಕೇಶ್, ಸಿ.ಎನ್. ಸಂತೋಷ್, ಆನಂದ್, ಸಂಜು, ಗಣೇಶಾಚಾರ್ ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top