ದಾವಣಗೆರೆ: ಮನೆ ಕಳ್ಳತ ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧ ಸುಮಾರು 03,52,೦೦೦ ರೂ ಬೆಲೆ ಬಾಳುವ 132 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಆರೋಪಿಯ ಮನೆಯಲ್ಲಿಟ್ಟಿದ್ದ ಒಂದು ಲಾಂಗ್ ಹಾಗೂ ೦3 ಜಿಂಕೆ ಕೋಡುಗಳನ್ನು ವಶಪಡಿಸಿಕೊಂಡಿರುತ್ತದೆ. ವಶಪಡಿಸಿಕೊಂಡ 03 ಜಿಂಕೆಯ ಕೋಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿಯ ಸಂತೋಷ್ ಹೆಚ್.ಬಿ.(43) ಠಾಣೆಗೆ ಹಾಜರಾಗಿ ನೀಡಿದ ದೂರು ನೀಡಿದ್ದರು. ಯಾರೋ ಕಳ್ಳರು ಮನೆಯೊಳಗೆ ಬಂದು ಮನೆಯೊಳಗೆ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ 132 ಬಂಗಾರದ ಆಭರಣಗಳು ಹಾಗೂ 50 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೇಲ್ಕಂಡ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ಡಿವೈಎಸ್ ಪಿ ಡಾ. ಸಂತೋಷ್ ಕೆ.ಎಂ. ಮಾರ್ಗದರ್ಶನದಲ್ಲಿ ಪಿಐ ಪಿ.ಬಿ. ಮಧು ನೇತೃತ್ವದಲ್ಲಿ ಪಿಎಸ್ ಐ ಗಳಾದ ಚಂದ್ರಶೇಖರ್ , ಮೊಹಮ್ಮದ್ ಸೈಫುದ್ದೀನ್ , ಶಿವನಗೌಡ , ಶಶಿಧರ್, ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ಆರೋಪಿ ಚಾಂದ್ಪೀರ್ @ ಚಾಂದ್, 27ವಶಕ್ಕೆ ಪಡೆಯಲಾಗಿದೆ.
ಆರೋಪಿತನಿಂದ ಪ್ರಕರಣಕ್ಕೆ ಸಂಬAಧಿಸಿದಂತೆ ಸುಮಾರು 03,52,೦೦೦ ರೂ ಬೆಲೆ ಬಾಳುವ 132 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಆರೋಪಿಯ ಮನೆಯಲ್ಲಿಟ್ಟಿದ್ದ ಒಂದು ಲಾಂಗ್ ಹಾಗೂ ೦3 ಜಿಂಕೆ ಕೋಡುಗಳನ್ನು ವಶಪಡಿಸಿಕೊಂಡಿರುತ್ತದೆ. ವಶಪಡಿಸಿಕೊಂಡ 03 ಜಿಂಕೆಯ ಕೋಡುಗಳನ್ನು ಅರಣ್ಯ ಸಂರಕ್ಷಣಾಧಿಕಾರಿಗಳು ಚನ್ನಗಿರಿ ಘಟಕಕ್ಕೆ ಮುಂದಿನ ಕ್ರಮಕ್ಕಾಗಿ ನೀಡಲಾಗಿದೆ. ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಎಸ್ ಪಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಎಸ್ ಪಿ ಆರ್.ಬಿ ಬಸರಗಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.



