ಡಿವಿಜಿ ಸುದ್ದಿ, ದಾವಣಗೆರೆ: ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಕ್ಷತ್ರಿಯ ಸಮೂದಾಯದ ಮುಖಂಡ ಯಶವಂತರಾವ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಕೆಲವೇ ಮತಗಳ ಅಂತರದಿಂದ ಸೋತಿದ್ದಾರೆ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತತವಾಗಿ ಬಿಜೆಪಿ ಸಂಸದರು, 6 ಶಾಸಕರು ಹಾಗೂ ತಾಲ್ಲೂಕು ಪಂಚಾಯತ ಹಾಗೂ ನಗರ ಪಾಲಿಕೆ ಚುನಾವಣೆಯಲ್ಲಿಸಾಕಷ್ಟು ಶ್ರಮ ವಹಿಸಿದ್ದಾರೆ ಎಂದರು.
ಬಿಜೆಪಿ ಜಯಭೇರಿ ಬಾರಿಸಲು ಕ್ಷತ್ರಿಯ ಸಮೂದಾಯಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಯಶವಂತರಾವ್ ಜಾದವ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.42 ಕ್ಷತ್ರಿಯ ಸಮೂದಾಯಗಳ ಪೈಕಿ ಯಾರಿಗಾದರೂ ಒಬ್ಬರಿಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಾದವ ಮಹಾಸಭದ ಬಾಡದ ಆನಂದರಾಜ್. ಕಲಾಲ್ ಸಮಾಜದ ಮಹಾಂತೇಶ್ ಕಲಾಲ್ ಬಣಜಾರ ಸಮಾಜದ ಹಾಲೇಕಲ್ಲು ಚಂದ್ರನಾಯ್ಕ್, ಭಾವಸಾರ ಸಮಾಜದ ರಮೇಶ್ ತೇಲ್ಕರ್, ಗೊಂದಾಳಿ ಸಮಾಜದ ನರಸಿಂಗ್ ರಾವ್ ಗೊಂದಾಳಿ, ಮರಾಠ ಸಮಾಜದ ಪರುಶರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



