Connect with us

Dvgsuddi Kannada | online news portal | Kannada news online

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ತರಳಬಾಳು ಸಂಶೋಧನಾ ಅಧ್ಯಯನ ಕೇಂದ್ರ; ಕುಲಪತಿ ಡಾ. ಬಿ.ವಿ ಕುಂಬಾರ

IMG 20221031 152409

ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ತರಳಬಾಳು ಸಂಶೋಧನಾ ಅಧ್ಯಯನ ಕೇಂದ್ರ; ಕುಲಪತಿ ಡಾ. ಬಿ.ವಿ ಕುಂಬಾರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯಲ್ಲಿ ತರಳಬಾಳು ಸಂಶೋಧನಾ ಅಧ್ಯಯನ ಕೇಂದ್ರ ಆರಂಭಿಸಲು ಸಿರಿಗೆರೆಯ ತರಳಬಾಳು‌ ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ ಎಂಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ವಿ ಕುಂಬಾರ ತಿಳಿಸಿದರು.

ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಮಾಗನೂರು ಬಸಪ್ಪ ಅವರ ಸಂಸ್ಮರಣಾ ಗ್ರಂಥ ಹಾಗೂ ಅವರ ಆತ್ಮಚರಿತ್ರೆಯ ಹಿಂದಿ ಅನುವಾದಿತ ಕೃತಿಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಈ ಸಂಶೋಧನಾ ಕೇಂದ್ರದಲ್ಲಿ ಮಾಗನೂರು ಬಸಪ್ಪ ಸೇರಿದಂತೆ ಎಲ್ಲ ಟ್ರಸ್ಟ್‌ಗಳ ಸಹಯೋಗದೊಂದಿಗೆ ವಿವಿಯು ಮಾದರಿ ಕಾರ್ಯಕ್ರಮಗಳನ್ನು ರೂಪಿಸಲಿದೆ‌ ಎಂದು ತಿಳಿಸಿದರು.

ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಮಾಗನೂರು ಬಸಪ್ಪ ಅವರು ಗಾಂಧಿ ತತ್ವದಂತೆ ನಿಸ್ವಾರ್ಥ ಬದುಕು ನಡೆಸಿದರು. ಸಮಾಜದ ಹಿತಾಸಕ್ತಿ ಬಳಿಕವೇ ಸ್ವಂತ ಕೆಲಸಕ್ಕೆ ಆದ್ಯತೆ ನೀಡಿದ್ದರು. ದಾವಣಗೆರೆಯ ಅನುಭವ ಮಂಟಪ ವಿದ್ಯಾಸಂಸ್ಥೆಗೆ ಅಸ್ತಿಭಾರ ಹಾಕಿದ್ದರು ಎಂದು ನೆನೆದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಚಿಂತಕ ಡಾ.ನಾ. ಲೋಕೇಶ ಒಡೆಯರ್ , ಡಾ.ಎಚ್.ವಿ.ವಾಮದೇವಪ್ಪ, ಡಾ. ಎಚ್.ಎಸ್.ಮಂಜುನಾಥ ಕುರ್ಕಿ, ಡಾ.ಎಂ. ಈಶ್ವರಶರ್ಮ, ಬಿ.ಎನ್.ಗೋವಿಂದರಾವ್ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top