ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹರಿಹರ ನಗರದ ಎಪಿಎಂಸಿ ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಗ್ರಾಮಾಂತರ ಉಪ-ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್ ಅವರಿಗೆ ಹರಿಹರ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಹರಿಹರ ನಗರದ ಎ.ಪಿ.ಎಂ.ಸಿ ಗೇಟಿನ ಮುಂಭಾಗ ದಾಳಿ ಮಾಡಿದ್ದು, ಇಬ್ಬರು ಆರೋಪಿತರನ್ನು ಬಮಧನ ಮಾಡಲಾಗಿದೆ.
ಆರೋಪಿಗಳಿಂದ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ 293 ಗ್ರಾಂ ಗಾಂಜಾ ಸೊಪ್ಪು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಮೋಟಾರ್ ಬೈಕ್ ಹಾಗು ಎರಡು ಮೊಬೈಲ್ ಪೋನ್ಗಳು, 48 ಗ್ರಾಂ ತೂಕದ ಬೆಳ್ಳಿ ಚೈನ್, 33 ಗ್ರಾಂ ತೋಕದ ಬೆಳ್ಳಿಯ ಕಡಗವನ್ನು ವಶಪಡಿಸಿಕೊಳ್ಳಲಾಗಿರುತ್ತದೆ, ಈ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಗಾಂಜಾ ಮಾರಾಟ ಪತ್ತೆ ಕಾರ್ಯದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್ ಐಪಿಎಸ್ ನೇತೃತ್ವದಲ್ಲಿ ಹರಿಹರ ನಗರ ಠಾಣೆಯ ಪಿಎಸ್ಐ ಶಂಕರಗೌಡ ಪಾಟೀಲ್, ಎಸ್.ಬಿ ಚಿದಾನಂದಪ್ಪ ಪಿಎಸ್ಐ ಹಾಗೂ ಸಿಬ್ಬಂದಿಯವರಾದ ಕರಿಬಸಪ್ಪ ಎಎಸ್ಐ, ಸೈಯದ್ ಗಫಾರ್, ತಿಮ್ಮೇಶ್, ನಾಗರಾಜಯ್ಯ, ಸಿದ್ದರಾಜು, ನೂರುಲ್ಲಾ ಕಲಾರಿ ರವರು ದಾಳಿಯಲ್ಲಿ ಭಾಗವಹಿಸಿಧದರು. ಈ ಕಾರ್ಯಾಚರಣೆಗೆ ಎಸ್ ಪಿ ಸಿ.ಬಿ ರಿಷ್ಯಂತ್ ಹಾಗೂ ಹೆಚ್ಚುವರಿ ಎಅ್ ಪಿ ಆರ್. ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಮದ್ದಾರೆ.



