ದಾವಣಗೆರೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ಇ-ಹುಂಡಿ ಕಾರ್ಯಕ್ರಮವನ್ನು ಸೆ.19 ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಶಿವಾಜಿ ಸರ್ಕಲ್ ಬಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಗುವುದು.
ಪ್ರಧಾನ ಮಂತ್ರಿಯವರ ಕನಸಿನ ಕೂಸಾದ “ಡಿಜಿಟಲ್ ಇಂಡಿಯಾ” ಪ್ರಯುಕ್ತ ಜಿಲ್ಲೆಯ 108 ದೇವಸ್ಥಾನಗಳು, ಮಸೀದಿ, ಚರ್ಚ್ಗಳಲ್ಲಿ ಎಸ್.ಬಿ.ಐ. ಕ್ಯು-ಆರ್ ಕೋಡ್ ಸ್ಥಾಪಿಸಿ ಭಕ್ತರ ಭೌತಿಕ ದೇಣಿಗೆ ಹಣವನ್ನು ಕ್ಯು-ಆರ್ ಕೋಡ್ ಮೂಲಕ ನೇರವಾಗಿ ದೇವಳದ ಖಾತೆಗೆ ವರ್ಗಾವಣೆಗೊಳಿಸುವ ಸವಲತ್ತನ್ನು ಸ್ಥಳದಲ್ಲಿ ರೂಪಿಸಲಾಗುವುದು.ಕಾರ್ಯಕ್ರಮದಲ್ಲಿ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ನಂದಕಿಶೋರ್, ಪ್ರಧಾನ ವ್ಯವಸ್ಥಾಪಕ ಸಂದೀಪ್ ಭಟ್ನಾಗರ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್ ಉಪಸ್ಥಿತರಿರುವರು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



