ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯದ ಪ್ರದೇಶ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಾಗಿದೆ. ಇಂದು (ಜು.04) 13,405 ಕ್ಯೂಸೆಕ್ಸ್ ಒಳ ಹರಿವು ಇದ್ದು, ನೀರಿನ ಮಟ್ಟ 155.07 ಅಡಿಯಷ್ಟಿದೆ.
ಈ ಸಲದ ಮುಂಗಾರು ಹಂಗಾಮಿಗೆ 165 ಅಡಿ ತಲುಪಿದ ನಂತರವಷ್ಟೇ ನಾಲೆಗೆ ನೀರು ಬಿಡುವುದಾಗಿ ಕಾಡಾ ಅಧ್ಯಕ್ಷರು ಮಾಹಿತಿ ನೀಡಿದ್ದು, ಇದೀಗ ಒಳ ಹರಿವು ಹೆಚ್ಚಳವಾಗಿದೆ. ಜು. 01 ರಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಜು. 15 ರೊಳಗೆ 165 ಅಡಿ ತಲುಪುವ ಭರವಸೆ ಮೂಡಿದೆ.
- ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 155.07
- ಪೂರ್ಣ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 38.941 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 13,405 ಕ್ಯೂಸೆಕ್ಸ್
- ಒಟ್ಟು ಹೊರಹರಿವು: 130 ಕ್ಯೂಸೆಕ್ಸ್
- ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
- ಎಡದಂಡೆ ನಾಲೆ: 0.00ಕ್ಯೂಸೆಕ್ಸ್
- ಕಳೆದ ವರ್ಷ ಈ ದಿನ : 155.2ಅಡಿ



