ದಾವಣಗೆರೆ: ವಿಶ್ವದಾದ್ಯಂತ ರಕ್ತದಾನದ ಮಹತ್ವ ಸಾರುವ ಉದ್ದೇಶ ಹೊಂದಿದ್ದೇನೆ ಎಂದು ರಕ್ತದಾನಿ ಮಹಡಿಮನೆ ಶಿವಕುಮಾರ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ 23 ವರ್ಷದಿಂದ 88 ಬಾರಿ ರಕ್ತದಾನ ಮಾಡಿದ್ದೇನೆ. ಒಬ್ಬರ ರಕ್ತದಾನದಿಂದ ಮೂರು ಜನರಿಗೆ ಸಹಾಯವಾಗಲಿದೆ ರಕ್ತದಾನದ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿಸಬೇಕೆಂಬುದು ನನ್ನ ಉದ್ದೇಶ. ಆದ್ದರಿಂದ ನಾಳೆ ಬೆಂಗಳೂರಿಗೆ ತೆರಳಿ ನಂತರ ದೆಹಲಿಯಲ್ಲಿ ಜೂ.14 ರಂದು ಜರುಗುವ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಭಾಗವಹಿಸುವ ಉದ್ದೇಶವಿದೆ ಎಂದರು.
ಕಳೆದ 23 ವರ್ಷದಿಂದಲೂ ರಕ್ತದಾನ ಮಾಡುತ್ತಾ ರಕ್ತದಾನದ ಮಹತ್ವ ಸಾರುತ್ತಾ ಬಂದಿದ್ದೇನೆ. ದಾನಿಗಳು ನೆರವು ನೀಡಿದರೆ ಪ್ರಪಂಚ ಪರ್ಯಾಟನೆ ಮೂಲಕ ರಕ್ತದಾನದ ಅರಿವು ಮೂಡಿಸುವ ಉದ್ದೇಶವಿದೆ ಎಂದರು.ಸರ್ಕಾರ ಪ್ರಪಂಚ ಪರ್ಯಟನೆ ಮಾಡಲು ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು.



